×
Ad

ರಾಯಚೂರು | ಕ್ಷುಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಜಗಳ : ದ್ವಿಚಕ್ರ ವಾಹನಕ್ಕೆ ಬೆಂಕಿ, ಪ್ರಕರಣ ದಾಖಲು

Update: 2025-07-21 22:01 IST

ರಾಯಚೂರು: ಕ್ಷುಲ್ಲಕ ಕಾರಣಕ್ಕೆ ರಾಯಚೂರು ನಗರದ ತಿಮ್ಮಾಪೂರಪೇಟೆ ಮತ್ತು ಬೇಸ್ತವಾರಪೇಟೆ ಬಡಾವಣೆಯ ಎರಡು ಗುಂಪಿನ ನಡುವೆ ಜಗಳ ನಡೆದು ಸ್ಕೂಟಿಗೆ ಬೆಂಕಿ ಹಚ್ಚಿದ ಘಟನೆ ಭಾನುವಾರ ನಡೆದಿದೆ.

ರಾತ್ರಿ ತಿಮ್ಮಾಪೇಟೆ ಮತ್ತು ಬೇಸ್ತವಾರಪೇಟೆಯ ಯುವಕರ ಗುಂಪಿನ ನಡುವೆ ಕ್ಷುಲಕ ಕಾರಣಕ್ಕೆ ಜಗಳ ಉಂಟಾಗಿದೆ,  ಈ ವೇಳೆ ಸ್ಕೂಟಿಯ ಮೇಲೆ ಕಲ್ಲು ಹಾಕಿ ಜಖಂ ಗೊಳಿಸಿದ್ದಾರೆ. ಬಳಿಕ ವಾಹನಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಮಾಹಿತಿ ತಿಳಿದ ನೇತಾಜಿ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ನಡೆಸಿದ್ದಾರೆ. ಹಲ್ಲೆ ಮಾಡಿರುವ ಕುರಿತು ದೂರು ದಾಖಸಿಲಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಈ ಕುರಿತು ನೇತಾಜಿ ನಗರ ಪೋಲಿಸ್ ಠಾಣೆಯಲ್ಲಿ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News