×
Ad

ರಾಯಚೂರು | ಮಹಾನಗರ ಪಾಲಿಕೆಯಿಂದ ರಸ್ತೆ ಬದಿಯ ಗೂಡು ಅಂಗಡಿಗಳ ತೆರವು ಕಾರ್ಯಚರಣೆ

Update: 2025-01-17 17:10 IST

ರಾಯಚೂರು : ಮಹಾನಗರ ಪಾಲಿಕೆಯಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅನಧಿಕೃತವಾಗಿ ಹಾಕಲಾದ ಶೆಡ್ಗಳು, ಗೂಡು ಅಂಗಡಿಗಳನ್ನು ಶುಕ್ರವಾರ ತೆರವುಗೊಳಿಸಲಾಯಿತು.

ಮಹಾನಗರ ಪಾಲಿಕೆ ಉಪ ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ, ನಗರದ ಹೈದಾರಾಬಾದ್ ರಸ್ತೆಯ ಒಪೆಕ್ ಆಸ್ಪತ್ರೆಯ ಕಾಂಪೌಂಡ್ ಗೆ ಹತ್ತಿಕೊಂಡು ನಿರ್ಮಿಸಲಾಗಿದ್ದ ಶೆಡ್, ಗೂಡು ಅಂಗಡಿಗಳನ್ನು ತೆರವುಗೊಳಿಸಲಾಯಿತು.

ಜಿಲ್ಲಾಧಿಕಾರಿಗಳು, ಪಾಲಿಕೆ ಉಪ ಆಯುಕ್ತರ ಆದೇಶದ ಮೇರೆಗೆ ಆರೋಗ್ಯ ನಿರೀಕ್ಷಕ ಮಹ್ಮದ್ ಖಾನ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಮೇಶ, ಅಶೋಕ ಹಾಗೂ ಮುರುಳಿಗೌಡ ತೆರವು ಕಾರ್ಯ ಮಾಡಿದರು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಸೇರಿದಂತೆ ರಾಜ್ಯ ಹೆದ್ದಾರಿ-30, ರಾಷ್ಟ್ರೀಯ ಹೆದ್ದಾರಿ 150-ಎ ರಲ್ಲಿನ ರಸ್ತೆಗಳನ್ನು ಒತ್ತುವರಿ ಮಾಡಿ ಶೆಡ್ಗಳು, ಗೂಡು ಅಂಗಡಿಗಳನ್ನು ಮತ್ತು ಡಾಬಾಗಳನ್ನು ರಿಜಿಸ್ಟ್ರಾರ್ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ, ಬೆಂಗಳೂರು ರವರ ರಾಯಚೂರು ಜಿಲ್ಲೆ. ಸಿಂಧನೂರು ತಾಲೂಕು, ಸ್ಟೇಟ್ ಹೈವೇ-30 ನ್ಯಾಷಲ್ ಹೈವೇ 150-ಎ ರಲ್ಲಿನ ರಸ್ತೆ (ಮಾನ್ಯ ಜಿಲ್ಲಾಧಿಕಾರಿಗಳ ವಸತಿ ಗೃಹ ರಸ್ತೆಯಿಂದ ಸಾತ್ಮೈಲ್ ರಸ್ತೆಯವರೆಗೆ) ಗಡಿಗಳನ್ನು ಒತ್ತುವರಿ ಮಾಡಿ ಶೆಡ್ ಮತ್ತು ಡಾಬಾಗಳನ್ನು ಹಾಕಿಕೊಂಡಿರುವ ಬಗ್ಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದು ಪ್ರಕರಣವನ್ನು ದಾಖಲಿಸಿ, ವಿಚಾರಣೆ ನಿಗಧಿಪಡಿಸಿದ್ದರು.

ಈ ಬಗ್ಗೆ ಸಾತ್ ಮೈಲ್ ರಸ್ತೆಯಿಂದ ಹೈದಾರಾಬಾದ್ ರಸ್ತೆಯ ವರೆಗೆ ಸ್ವಂತ ಖರ್ಚಿನಲ್ಲಿ ತೆರವು ಮಾಡಬೇಕು ಎಂದು ಕೆಲ ದಿನಗಳ ಹಿಂದೆ ಆದೇಶ ಮಾಡಿದ್ದರು.

ಒಂದು ವೇಳೆ ಪಾಲಿಕೆಯಿಂದ ತೆರವು ಮಾಡಿದ್ದರೆ ಸರಕುಗಳು ಜಖಂಗೊಂಡಲ್ಲಿ ಈ ಕಚೇರಿಯು ಜವಾಬ್ದಾರರಾಗಿರುವುದಿಲ್ಲ ಹಾಗೂ ಯಾವುದೇ ನಷ್ಟ ಪರಿಹಾರವನ್ನು ಕೊಡಲಾಗವುದಿಲ್ಲ ಎಂದು ಸಾರ್ವಜನಿಕ ಪ್ರಕರಣೆಯ ಮೂಲಕ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿತ್ತು. ಇದೀಗ ಅನಧಿಕೃತವಾಗಿ ಹಾಕಿಕೊಳ್ಳಲಾಗಿದ್ದ ರಸ್ತೆ ಬದಿಯ ಗೂಡು ಅಂಗಡಿಗಳನ್ನು ತೆರವುಗೊಳಿಸಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News