×
Ad

ರಾಯಚೂರು | ಡಾ.ಜಯಲಕ್ಷ್ಮಿ ಅವರಿಗೆ ಟಿಟಿಡಿಯಿಂದ ಪುರಂದರೋತ್ಸವ ಪ್ರಶಸ್ತಿ

Update: 2025-12-25 19:35 IST

ಡಾ.ಜಯಲಕ್ಷ್ಮಿ ಮಂಗಳಮೂರ್ತಿ

ರಾಯಚೂರು : ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ 25-26ನೇ ಸಾಲಿನ ಪುರಂದರೋತ್ಸವ ಪ್ರಶಸ್ತಿಯನ್ನು ಈ ಬಾರಿ ನಾಡಿನ ದಾಸಸಾಹಿತ್ಯ ವಿದ್ವಾಂಸರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಯಚೂರಿನ ಡಾ. ಜಯಲಕ್ಷ್ಮಿ ಮಂಗಳಮೂರ್ತಿಗೆ ನೀಡಿ ಗೌರವಿಸಲಿದ್ದಾರೆ.

ಜ.17ರಂದು ತಿರುಮಲದಲ್ಲಿ ನಡೆಯುತ್ತಿರುವ ಪುರಂದರ ದಾಸರ ಆರಾಧನೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುವುದೆಂದು ಟಿ.ಟಿ.ಡಿ.ಯ ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷ ಅಧಿಕಾರಿ ವೇದಮೂರ್ತಿ ಪಂಡಿತ್ ಆನಂದ ತೀರ್ಥಾಚಾರ ಪಗಡಾಲ ಅವರು ತಿಳಿಸಿದ್ದಾರೆ.

ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ದಾಸ ಸಾಹಿತ್ಯದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ. ಶ್ರೀ ನರಸಿಂಹ ವಿಠಲ ಅಂಕಿತದಿಂದ 200ಕ್ಕೂ ಹೆಚ್ಚು ಸಂಕೀರ್ತನೆಗಳನು ರಚಿಸಿದ್ದಾರೆ. ಹತ್ತಕ್ಕೂ ಹೆಚ್ಚು ಮೌಲ್ಯಯುಕ್ತ ಗ್ರಂಥಗಳನ್ನು ರಚಿಸಿದ್ದಾರೆ. ಉಗಾ- ಬೋಗ, ಸುಳಾದಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಇವರು ಅತ್ಯುತ್ತಮ ವಾಗ್ಮಿಗಳಾಗಿದ್ದು ಹಲವಾರು ಸಂಘ ಸಂಸ್ಥೆಗಳಿಗೆ ಪದಾಧಿಕಾರಿಗಳಾಗಿದ್ದಾರೆ.

ರಾಯಚೂರಿನ ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾಗಿರುವ ಇವರು ವಿಜಯೇಂದ್ರ ಪ್ರಶಸ್ತಿ, ದಾಸ ಸಾಹಿತ್ಯ ರತ್ನ ಪ್ರಶಸ್ತಿ, ರಂಗ ವಿಠ್ಠಲ ಪ್ರಶಸ್ತಿ, ಸಿರಿ ಗೋವಿಂದ ವಿಠ್ಠಲ ಪ್ರಶಸ್ತಿ, ವಿಪ್ರಶ್ರೀ ಪ್ರಶಸ್ತಿ, ಪ್ರಸನ್ನ ವೆಂಕಟ ದಾಸರ ಪ್ರಶಸ್ತಿ, ಇವರ ಸಾಧನೆಗೆ ಸಂದ ಗೌರವಗಳಾ ಗಿವೆ. ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ನಿಂದ ಈ ಬಾರಿಯ ಪುರಂದರೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಅವರಿಗೆ ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ, ಹಿಂದಿನ ಅಧ್ಯಕ್ಷ ಗೋವಿಂದ್ ದಂಡಿನ್, ಉಪಾಧ್ಯಕ್ಷ ಗಾಯಕ ಡಾ.ಶೇಷಗಿರಿ ದಾಸ್, ಕಾರ್ಯದರ್ಶಿಗಳಾದ ರಮೇಶ್ ಕುಲಕರ್ಣಿ, ಜೆ. ಎಂ. ವೀರೇಶ್, ಕಾರ್ಯಕಾರಿ ಮಂಡಳಿಯ ಸದಸ್ಯರುಗಳಾದ ಸುರೇಶ್ ಕಲ್ಲೂರ್, ನರಸಿಂಹಮೂರ್ತಿ ಕುಲಕರ್ಣಿ, ವಸದೇಂದ್ರ ಸಿರವಾರ ರಮಾ ಕಾಂತ ಕುಲಕರ್ಣಿ, ರವೀಂದ್ರ ಕುಲಕರ್ಣಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News