×
Ad

ಸಿರವಾರ | ಕುರುಕುಂದ ಪ್ರೌಢಶಾಲೆಯಲ್ಲಿ ರಂಗೋತ್ಸವ ಕಾರ್ಯಕ್ರಮ

Update: 2025-02-24 19:18 IST

ಸಿರವಾರ : ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಚಟುವಟಿಕೆಗಳ ಮೂಲಕ ಅನುಭವದ ಕಲಿಕೆ ಮತ್ತು ಸಂತೋಷದಾಯಕ ಕಲಿಕೆಯನ್ನು ಉಂಟು ಮಾಡಲು ಸಹಕಾರಿಯಾಗಲಿದೆ ಎಂದು ನಾಗಲಿಂಗಪ್ಪ ತಿಳಿಸಿದರು.

ತಾಲೂಕಿನ ಕುರಕುಂದ ಪ್ರೌಢಶಾಲೆಯಲ್ಲಿ 2024- 25 ನೇ ಸಾಲಿನ ವಾರ್ಷಿಕ ಯೋಜನಾ ಮಂಡಳಿ ರಂಗೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ವಿಭಿನ್ನ ಕಲೆ ಸಂಸ್ಕೃತಿ ವಿವಿಧ ಚಟುವಟಿಕೆಗಳ ಮೂಲಕ ಶಾಲಾ ಪರಿಸರವನ್ನು ರೋಮಾಂಚಕ ಮತ್ತು ಸಂತೋಷದಾಯಕ ಕಲಿಕೆಯ ಸ್ಥಳವಾಗಿ ಪರಿವರ್ತಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶೇಖರಪ್ಪ ಗೌಡ ಮಾಲಿಪಾಟೀಲ್, ಮುಖ್ಯೋಪಾಧ್ಯಾಯರು ನಾಗಲಿಂಗಪ್ಪ, ಸದಸ್ಯರಾದ ಗಂಗಾಧರ್ ಬಡಿಗೇರ್, ಸಹ ಶಿಕ್ಷಕರಾದ ರತ್ನಾಕರ್, ಬಶರತ ಮೇಡಂ, ಶ್ರೀದೇವಿ ಸಜ್ಜನ್, ಅತಿಥಿ ಶಿಕ್ಷಕರಾದ ಉಮಾರ್, ಬಸವರಾಜ, ಶಾಲಾ ಮಕ್ಕಳು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News