×
Ad

ಕಲಬುರಗಿ: ಲಾರಿಗೆ ಬೈಕ್ ಢಿಕ್ಕಿ; ಸವಾರ ಸಾವು

Update: 2023-10-19 15:25 IST

ಕಲಬುರಗಿ: ನಿಂತ ಲಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚತ್ರಸಾಲ ಗ್ರಾಮದ ಬಳಿಯ ಪೆಟ್ರೋಲ್ ಪಂಪ್ ಬಳಿ ನಡೆದಿದೆ. 

ಮೃತ ವ್ಯಕ್ತಿಯನ್ನು ತೆಲಂಗಾಣದ ನಾಗರ ಕರ್ನೂಲ್ ನಿವಾಸಿ ಕಲ್ಲು ಗಣಿ ಕಾರ್ಮಿಕ ಲಕ್ಷ್ಮಣ ನಾರಾಯಣ (42) ಎಂದು ಗುರುತಿಸಲಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ವಿಕಾರಾಬಾದ್ ಬಳಿ ಸಾವನ್ನಪ್ಪಿದ್ದಾರೆ.

ಮಿರಿಯಾಣ ಠಾಣೆಯ ಸಬ್ ಇನ್ ಸ್ಪೆಕ್ಟರ್ ಎ.ಎಸ್. ಪಟೇಲ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News