‘ಲೋಕಾಯುಕ್ತ’ಕ್ಕೆ ಸ್ವ ಹಾಗೂ ಕುಟುಂಬದ ಆಸ್ತಿ ವಿವರ ಸಲ್ಲಿಸದ ಐವರು ಸಚಿವರು, 67 ಶಾಸಕರು, 28 ಪರಿಷತ್ ಸದಸ್ಯರು
ಬೆಂಗಳೂರು : ತನ್ನ ಮತ್ತು ಕುಟುಂಬ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ವಿವರ ಸಲ್ಲಿಸದ ಐವರು ಸಚಿವರು, 67 ಶಾಸಕರು, 28 ವಿಧಾನ ಪರಿಷತ್ತಿನ ಸದಸ್ಯರ ಹೆಸರುಗಳನ್ನು ಕರ್ನಾಟಕ ಲೋಕಾಯುಕ್ತ ಪ್ರಕಟಿಸಿದೆ.
ಸಚಿವರಾದ ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಝಮೀರ್ ಅಹ್ಮದ್ ಖಾನ್, ರಹೀಂ ಖಾನ್, ಕೆ.ವೆಂಕಟೇಶ್ ತನ್ನ ಮತ್ತು ಕುಟುಂಬ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ವಿವರ ಸಲ್ಲಿಸಿಲ್ಲ. ಅದೇ ರೀತಿ, ಶಾಸಕರಾದ ಲಕ್ಷ್ಮಣ್ ಸವದಿ, ಅಶೋಕ್ ಮಹಾದೇವಪ್ಪ ಪಟ್ಟಣ್, ವಿಜಯಾನಂದ ಕಾಶಪ್ಪನವರ್, ಕಟಕದೊಂಡ ವಿಠ್ಠಲ ದೊಂಡಿಬಾ, ಎಂ.ವೈ.ಪಾಟೀಲ್, ಅಲ್ಲಮ ಪ್ರಭು ಪಾಟೀಲ್, ಕನೀಝ್ ಫಾತಿಮಾ, ಶರಣು ಸಲಗರ್, ಸಿದ್ದುಪಾಟೀಲ್.
ಬಸನಗೌಡ ತುರುವಿಹಾಳ್, ಜನಾರ್ದನ ರೆಡ್ಡಿ, ಬಸವರಾಜ್ ರಾಯರೆಡ್ಡಿ, ರಾಘವೇಂದ್ರ ಬಸವರಾಜ ಹಿಟ್ನಾಳ್, ಗುರುಪಾದಗೌಡ ಸಂಗನಗೌಡ ಪಾಟೀಲ್, ಎನ್.ಎಚ್.ಕೋನರೆಡ್ಡಿ, ವಿನಯ್ ಕುಲಕರ್ಣಿ, ಸತೀಶ್ ಕೃಷ್ಣ ಸೈಲ್, ದಿನಕರ್ ಕೇಶವ ಶೆಟ್ಟಿ, ಬಸವರಾಜ ನೀಲಪ್ಪ ಶಿವಣ್ಣನವರ್, ಜಿ.ಎನ್.ಗಣೇಶ್.
ಎನ್.ವಿ.ಗೋಪಾಲಕೃಷ್ಣ, ಎಂ.ಚಂದ್ರಪ್ಪ, ಲತಾಮಲ್ಲಿಕಾರ್ಜುನ್, ಕೆ.ಎಸ್.ಬಸವಂತಪ್ಪ, ಶಾರದಾ ಪೂರ್ಯ ನಾಯ್ಕ್, ಬಿ.ಕೆ.ಸಂಗಮೇಶ್ವರ್, ಟಿ.ಡಿ.ರಾಜೇಗೌಡ, ನಯನಾ ಮೋಟಮ್ಮ, ಜಿ.ಎಚ್.ಶ್ರೀನಿವಾಸ್, ಆನಂದ್ ಕೆ.ಎಸ್. ಸುರೇಶ್ ಬಾಬು, ಡಾ.ಎಚ್.ಡಿ.ರಂಗನಾಥ್, ಬಿ.ಸುರೇಶ್ ಗೌಡ, ಎಚ್.ವಿ.ವೆಂಕಟೇಶ್, ಕೆ.ಎಚ್.ಪುಟ್ಟಸ್ವಾಮಿಗೌಡ, ಎಸ್.ಎನ್.ಸುಬ್ಬಾರೆಡ್ಡಿ, ಬಿ.ಎನ್.ರವಿಕುಮಾರ್, ಜಿ.ಕೆ.ವೆಂಕಟಶಿವರೆಡ್ಡಿ, ಸಮೃದ್ಧಿ ಮಂಜುನಾಥ್.
ರೂಪಕಲಾ, ಕೆ.ವೈ.ನಂಜೇಗೌಡ, ಕೆ.ಗೋಪಾಲಯ್ಯ, ಎ.ಸಿ.ಶ್ರೀನಿವಾಸ್, ಎನ್.ಎ.ಹಾರೀಸ್, ಬಿ.ಶಿವಣ್ಣ, ಶ್ರೀನಿವಾಸಯ್ಯ, ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ಉದಯ ಕೆ.ಎಂ., ದರ್ಶನ್ ಪುಟ್ಟಣ್ಣಯ್ಯ, ರವಿಕುಮಾರ್ ಗೌಡ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಸಿ.ಎನ್.ಬಾಲಕೃಷ್ಣ, ಎಚ್.ಕೆ.ಸುರೇಶ್, ಎಚ್.ಡಿ.ರೇವಣ್ಣ, ಎ.ಮಂಜು, ಸಿಮೆಂಟ್ ಮಂಜು.
ಡಾ.ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ರವಿಶಂಕರ್, ಅನಿಲ್ ಚಿಕ್ಕಮಾದು, ಹರೀಶ್ ಗೌಡ, ಎಂ.ಆರ್.ಮಂಜುನಾಥ್, ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ.
ವಿಧಾನ ಪರಿಷತ್ ಸದಸ್ಯರು: ಸಲೀಂ ಅಹ್ಮದ್, ಎಚ್.ವಿಶ್ವನಾಥ್, ಅಬ್ದುಲ್ ಝಬ್ಬಾರ್, ಎಂ.ಎಲ್.ಅನಿಲ್ ಕುಮಾರ್, ಬಸನಗೌಡ ಬಾದರ್ಲಿ, ಗೋವಿಂದರಾಜು, ಐವನ್ ಡಿಸೋಜಾ, ಟಿ.ಎನ್.ಜವರಾಯಿಗೌಡ, ಸಿ.ಎನ್.ಮಂಜೇಗೌಡ, ಡಾ.ಎಂ.ಜಿ.ಮುಳೆ, ಎನ್.ನಾಗರಾಜು(ಎಂಟಿಬಿ).
ನಸೀರ್ ಅಹ್ಮದ್, ಕೆ.ಎಸ್.ನವೀನ್, ಪ್ರದೀಪ್ ಶೆಟ್ಟರ್, ಪಿ.ಎಚ್.ಪೂಜಾರ್, ರಾಜೇಂದ್ರ ರಾಜಣ್ಣ, ರಾಮೋಜಿಗೌಡ, ಶಶೀಲ್ ಜಿ.ನಮೋಶಿ, ಎಸ್.ವಿ.ಸಂಕನೂರ, ಸುನೀಲ್ ವಲ್ಯಾಪುರ್, ಸನೀಲ್ಗೌಡ ಪಾಟೀಲ್, ಟಿ.ಎ.ಶರವಣ, ವೈ.ಎಂ.ಸತೀಶ್, ಸೂರಜ್ ರೇವಣ್ಣ, ಎಚ್.ಪಿ.ಸುಧಾಮ್ ದಾಸ್, ತಿಪ್ಪಣ್ಣಪ್ಪ ಕಮಕನೂರ, ಡಾ.ಡಿ.ತಿಮ್ಮಯ್ಯ, ಕೆ.ವಿವೇಕಾನಂದ.
ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್, ಶಾಸಕರಾದ ಬಿ.ಎಂ.ನಾಗರಾಜು, ಎಂ.ಟಿ.ಕೃಷ್ಣಪ್ಪ, ಯಾಸೀರ್ ಅಹ್ಮದ್ ಖಾನ್ ಪಠಾಣ್, ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ನಿಗದಿತ ಕಾಲಾವಧಿ ಮುಗಿದ ನಂತರ ಆಸ್ತಿ ವಿವರ ಸಲ್ಲಿಸಿದ್ದಾರೆ ಎಂದು ಲೋಕಾಯುಕ್ತ ತಿಳಿಸಿದೆ.
ಲೋಕಾಯುಕ್ತ ಕಾಯ್ದೆಯ ಕಲಂ 22(1) ಮತ್ತು (7)ರ ಪ್ರಕಾರ ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು ಪ್ರತಿ ವರ್ಷ ಜೂನ್ 30ರೊಳಗೆ ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ವಿವರವನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂಬ ಆದೇಶ ಇದೆ.