ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2025-08-16 22:00 IST
ಹಿರಿಯಡ್ಕ, ಆ.16: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಬೊಮ್ಮರಬೆಟ್ಟು ಗ್ರಾಮದ ಜಯರಾಜ್ (43) ಎಂಬವರು ಆ.15ರಂದು ಸಂಜೆ ವೇಳೆ ಮನೆಯ ಕಿಟಕಿಯ ಕಬ್ಬಿಣದ ರಾಡ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ: ಮದ್ಯಪಾನ ಮಾಡುವ ಚಟ ಹೊಂದಿದ್ದ ಉತ್ತರ ಪ್ರದೇಶ ಮೂಲದ ಮಲ್ಪೆಯಲ್ಲಿ ವಾಸವಾಗಿರುವ ಗಂಗಾ ಪ್ರಸಾದ್(49) ಎಂಬವರು ಆ.15ರಂದು ಸಂಜೆ ವೇಳೆ ಮನೆಯ ಬೆಡ್ರೂಮ್ನ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.