ಸಮಪರ್ಕ ಕರ್ತವ್ಯ ನಿರ್ವಹಣೆಯಿಂದ ಬಲಿಷ್ಠ ದೇಶ ಸಾಧ್ಯ: ರಶ್ಮೀ ಎಸ್.ಆರ್.
ಕುಂದಾಪುರ, ಆ.15: ನಮ್ಮ ಸಂಸ್ಕೃತಿ, ಪುರಾತನ ತತ್ವ, ಎಲ್ಲರನ್ನೂ ಪರಿವಾರದಂತೆ ನೋಡುವ, ದೇಶ, ತಂದೆತಾಯಿಯನ್ನು ಗೌರವ, ಕಾಳಜಿಯಿಂದ ಕಾಣುವ ಭಾವ ನಮ್ಮಲ್ಲಿ ಮತ್ತೆ ಮೂಡಬೇಕಾಗಿದೆ. ಆಸ್ತಿಗಿಂತ ಮಾನವೀಯ ಮೌಲ್ಯ ಶ್ರೇಷ್ಠವಾದುದು. ನೂರನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಮ್ಮ ದೇಶ ಸಂತೋಷ ದಲ್ಲೂ ಅಗ್ರಸ್ಥಾನಿಯಾಗಿರಬೇಕು ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಹೇಳಿದ್ದಾರೆ.
ಕುಂದಾಪುರದ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತದ ನೇತೃತ್ವದಲ್ಲಿ ಶನಿವಾರ ನಡೆದ80 ನೇ ಸ್ವಾತಂತ್ರ್ಯೊತ್ಸವದ ಧ್ವಜಾರೋಹಣ ನೆರವೇರಿಸಿ, ಅವರು ಸಂದೇಶ ನೀಡಿದರು.
ಎಷ್ಟೊಂದು ತ್ಯಾಗ, ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯ ನಮ್ಮದು. ನಾನು ಭಾರತೀಯ ಎಂಬ ಭಾವ ಪ್ರತಿ ಕ್ಷಣವೂ, ಪ್ರತಿಯೊಬ್ಬರಲ್ಲೂ ಇರಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಮಹನೀಯರೊಂದಿಗೆ, ದೇಶ ಕಾಯುವ ಯೋಧರನ್ನು ನೆನೆಯೋಣ, ಸೈನಿಕರ ಕುಟುಂಬಕ್ಕೆ ಸದಾ ಋಣಿಯಾಗಿರೋಣ. ಭಾರತವಿಂದು ಶಿಕ್ಷಣ, ಕ್ರೀಡೆ, ಬಾಹ್ಯಾಕಾಶ, ವಿಜ್ಞಾನ- ತಂತ್ರಜ್ಞಾನ ಎಲ್ಲದರಲ್ಲೂ ವಿಶ್ವ ಭೂಪಟದಲ್ಲಿ ವಿಶೇಷ ಸ್ಥಾನ ಪಡೆದಿದೆ. ನಮ್ಮ ಕರ್ತವ್ಯ ನಿರ್ವಹಣೆಯೊಂದಿಗೆ ದೇಶವನ್ನು ಮತ್ತಷ್ಟು ಬಲಿಷ್ಠಗೊಳಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಹೋರಾಟ, ತ್ಯಾಗ, ಬಲಿದಾನದಿಂದ ದೇಶ ಸ್ವತಂತ್ರಗೊಂಡಿತು. ಪ್ರತೀ ವರ್ಷ ಇದನ್ನು ನಾವು ಮೆಲುಕು ಹಾಕಬೇಕು. ದೇಶಾಭಿಮಾನ ಹೆಚ್ಚಾಗ ಬೇಕು. ದೇಶ ಪ್ರಪಂಚದ 4 ನೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಜಾತಿ, ಧರ್ಮಕ್ಕಿಂತ ದೇಶ ದೊಡ್ಡದು ಎನ್ನುವ ಅಭಿಮಾನ ಎಲ್ಲರಲ್ಲೂ ಮೂಡಲಿ ಎಂದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ, ಪುರಸಭೆ ಮಾಜಿ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಗುಣರತ್ನಾ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಶೇಖರ ಪೂಜಾರಿ, ಪ್ರಭಾರ್ಕ ವಿ., ಮಾಜಿ ಸದಸ್ಯರು, ಮುಖ್ಯಾಧಿ ಕಾರಿ ಆನಂದ್, ಗ್ರೇಡ್ -2 ತಹಶಿರ್ಲ್ದಾ ವಸಂತ್ ಕುರ್ಮಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ., ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ., ಯುವಜನಾ ಸೇವಾ ಕ್ರಿಡಾಧಿಕಾರಿ ಸತ್ಯನಾರಾಯಣ, ತಾಲೂಕು ಆರೋಗ್ಯಾಧಿ ಕಾರಿ ಡಾ.ಪ್ರೇಮಾನಂದ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ತಹಶೀರ್ಲ್ದಾ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿ, ಕ್ಷೆತ್ರ ಶಿಕ್ಷಣಾಧಿಕಾರಿ ಎಚ್. ಶೋಭಾ ಶೆಟ್ಟಿವಂದಿಸಿದರು. ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಬಳಿಕ ವಿವಿಧ ಶಾಲಾ -ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು.