ಮಾರ್ಚ್ 21ರಂದು ಡಾ.ಶಿವರಾಮ ಕಾರಂತ ಕುರಿತು ರಾ.ವಿಚಾರ ಸಂಕಿರಣ
Update: 2025-03-08 18:14 IST
ಉಡುಪಿ, ಮಾ.8: ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಇವರ ಆಶ್ರಯದಲ್ಲಿ ಹಾವೇರಿಯ ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯ ಮತ್ತು ಗೌರಮ್ಮ ಬ. ಅಂಕಲಕೋಟಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಶಿಗ್ಗಾ ಇವರ ಸಹಯೋಗದಲ್ಲಿ ಡಾ.ಶಿವರಾಮ ಕಾರಂತರ ಬರಹಗಳು : ಸಮಕಾಲೀನ ಚಿಂತನೆ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಾರ್ಚ್ 21ರಂದು ಹಾವೇರಿಯ ಜಿ.ಎಚ್ ಕಾಲೇಜು ಸಭಾಭವನದಲ್ಲಿ ಅಯೋಜಿಸಲಾಗಿದೆ.
ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆಗೆ ಅವಕಾಶವಿದ್ದು, ನಾಡಿನ ಗಣ್ಯ ಸಂಪನ್ಮೂಲ ವ್ಯಕ್ತಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಸಂಘಟನಾ ಕಾರ್ಯದರ್ಶಿ ಡಾ. ಕೆ ಶಮಂತಕುಮಾರ ಕೆ.ಎಸ್ ಮೊ.ನಂ:8147404640 ಮತ್ತು ಟ್ರಸ್ಟಿನ ಮೊ.ನಂ: 6362517472ನ್ನು ಸಂಪರ್ಕಿಸಬಹುದು ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.