ಉಡುಪಿ: ಜೂ. 30ಕ್ಕೆ ನಿರ್ದೇಶಕ ರಘುನಂದನರೊಂದಿಗೆ ಒಂದು ಸಂಜೆ
Update: 2024-06-24 21:05 IST
ಉಡುಪಿ, ಜೂ.24: ಉಡುಪಿಯ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು ಆಶ್ರಯದಲ್ಲಿ ‘ನಾನು ಸತ್ತ ಮೇಲೆ’ ಕವನ ಸಂಕಲನ ಮತ್ತು ‘ತುಯ್ತವೆಲ್ಲ ನವ್ಯದತ್ತ’-ಬೇಂದ್ರೆ ಕಾವ್ಯ ಮೀಮಾಂಸೆ ಪುಸ್ತಕಗಳ ಹಿನ್ನೆಲೆಯಲ್ಲಿ ಕೃತಿಗಳ ಲೇಖಕರಾದ ನಿರ್ದೇಶಕ ರಘುನಂದನ್ ಅವರೊಂದಿಗೆ ಒಂದು ಸಂಜೆ ಕಾರ್ಯಕ್ರಮವನ್ನು ಜೂ.30ರ ರವಿವಾರ ಸಂಜೆ 4:30ಕ್ಕೆ ಎಂ.ಜಿ.ಎಂ ಕಾಲೇಜಿನ ಆಡಿಯೋ ವಿಷುವಲ್ ಹಾಲಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಲೇಖಕರೊಡನೆ ಮಾತುಕತೆಯಲ್ಲಿ ಪ್ರೊ.ಮುರುಳೀಧರ ಉಪಾಧ್ಯ ಮತ್ತು ಪ್ರೊ.ಕೆ ಫಣಿರಾಜ್ ಭಾಗವಹಿ ಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮತ್ತು ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.