×
Ad

ಬ್ರಹ್ಮಾವರ: ಹಬ್ಬಕ್ಕೆ ಕದಿರು ತರಲು ಹೋದ ಕೃಷಿಕ ಬಾವಿಗೆ ಬಿದ್ದು ಮೃತ್ಯು

Update: 2023-10-15 19:35 IST

ಬ್ರಹ್ಮಾವರ, ಅ.15: ಕದಿರು ಕಟ್ಟುವ (ಹೊಸ್ತು) ಹಬ್ಬಕ್ಕಾಗಿ ಗದ್ದೆಗೆ ಕದಿರು ತರಲು ಹೋದ ಕೃಷಿಕರೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಮೃತರನ್ನು ದೇವಣ್ಣ ನಾಯ್ಕ(49) ಎಂದು ಗುರುತಿಸಲಾಗಿದೆ.

ಕದಿರು ಕಟ್ಟುವ ಹಬ್ಬದ ಬಗ್ಗೆ ಮನೆಯ ಎದುರು ಇರುವ ಗದ್ದೆಗೆ ಕದಿರು ತರಲು ಹೋದ ಇವರು, ತೋಟದಲ್ಲಿ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News