×
Ad

77 ‘ಸಾಧಕ’ರಿಗೆ ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ

Update: 2025-10-31 20:10 IST

ಉಡುಪಿ, ಅ.31: ರಾಜ್ಯದ 70ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುವ 2025ನೇ ಸಾಲಿನ ಜಿಲ್ಲಾ ಮಟ್ಟದ ಸನ್ಮಾನಕ್ಕೆ ಉಡುಪಿ ಜಿಲ್ಲೆಯಿಂದ ಒಟ್ಟು 77 ಮಂದಿ ‘ಸಾದಕ’ರನ್ನು ಆಯ್ಕೆ ಮಾಡಲಾಗಿದೆ.

ನಾಳೆ ಉಡುಪಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಸಾಧಕರನ್ನು ಸನ್ಮಾನಿಸಲಿದ್ದಾರೆ.

ಸನ್ಮಾನಕ್ಕೆ ವೈಯಕ್ತಿಕ ವಿಭಾಗದಲ್ಲಿ 64 ಮಂದಿ ಆಯ್ಕೆಯಾದರೆ, ಉಳಿದಂತೆ 13 ಸಂಘಸಂಸ್ಥೆಗಳು, ಕಲಾ ತಂಡಗಳು ಸೇರಿವೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಅವರೇ ಸನ್ಮಾನಿತರ ಪಟ್ಟಿಯನ್ನು ಬಿಡುಗಡೆ ಗೊಳಿಸಿದ್ದಾರೆ. ಈ ಬಾರಿಯ ಜಿಲ್ಲಾ ಮಟ್ಟದ ಸನ್ಮಾನಕ್ಕೆ ಆಯ್ಕೆಯಾದವರ ವಿವರ ಹೀಗಿದೆ.

ಎಸ್.ಜಯಕರ ಶೆಟ್ಟಿ, ಶಾನಾಡಿ ಕುಂದಾಪುರ ತಾಲೂಕು (ಸಮಾಜ ಸೇವೆ), ಗುರುರಾಜ ರಾವ್, ಉಳಿಯಾರಗೋಳಿ ಕಾಪು ತಾಲೂಕು (ಪಾಕತಜ್ಞ), ಸತೀಶ್ ಬೇಕಲ್, ಮಣಿಪಾಲ ಉಡುಪಿ ತಾಲೂಕು (ಆರೋಗ್ಯ ಮತ್ತು ಸಮಾಜ ಸೇವೆ), ಕೆ.ಕೊರಗ ಪೂಜಾರಿ, ಕೋಡಿ ಕನ್ಯಾಣ ಬ್ರಹ್ಮಾವರ ತಾಲೂಕು (ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರ), ವೈ.ಕುಮಾರಸ್ವಾಮಿ, ನಾಡ್ಪಾಲು ಹೆಬ್ರಿ ತಾಲೂಕು (ಕ್ರೀಡೆ), ಬಿಪಿನಚಂದ್ರ ಪಾಲ್ ನಕ್ರೆ, ಕುಕ್ಕಂದೂರು ಕಾರ್ಕಳ ತಾಲೂಕು (ಸಾಹಿತ್ಯ, ಸಮಾಜಸೇವೆ), ಶ್ರೀಧರ ಭಟ್, ಬೆಳ್ಮಣ್ಣು ಕಾರ್ಕಳ ತಾಲೂಕು (ದೇವಾರಾಧನೆ), ಎಚ್.ಜಯವಂತ ರಾವ್, ಹಿರಿಯಡ್ಕ ಉಡುಪಿ ತಾಲೂಕು (ಸಮಾಜಸೇವೆ), ಸರ್ವೋತ್ತಮ ಗಾಣಿಗ, ಹರಾಡಿ ಬ್ರಹ್ಮಾವರ ತಾಲೂಕು (ಯಕ್ಷಗಾನ), ರಜಿನಾಲ್ಡ್ ಪುಟಾರ್ಡೋ, ಕೆಳಾರ್ಕಳಬೆಟ್ಟು ಉಡುಪಿ ತಾಲೂಕು (ನಾಟಕ).

ಡಾ.ಶೇಖ್ ವಾಹಿದ್, ಚಿಟ್ಪಾಡಿ ಉಡುಪಿ ತಾಲೂಕು (ಸಮಾಜ ಸೇವೆ), ವಿಠಲ ಪೂಜಾರಿ, ಕಲ್ಯಾಣಪುರ ಉಡುಪಿ ತಾಲೂಕು (ಸಮಾಜ ಸೇವೆ), ರವೀಂದ್ರ ಶೆಟ್ಟಿ, ಶಿರೂರು ಬೈಂದೂರು ತಾಲೂಕು (ಕೃಷಿ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರ), ಪ್ರಭಾಕರ ಬಿ.ಕುಂದರ್, ಕುಮ್ರಗೋಡು ಬ್ರಹ್ಮಾವರ ತಾಲೂಕು (ರಂಗಭೂಮಿ ಮತ್ತು ಸಿನಿಮಾ), ರಾಜೀವ ಕೊಠಾರಿ, ಕುಂದಾಪುರ (ಚಲನಚಿತ್ರ), ಪಾಂಡು ದೇವಾಡಿಗ, ಕಾರ್ಕಳ (ಸಂಗೀತ, ಸ್ಯಾಕ್ಸೋಫೋನ್ ವಾದ್ಯ), ಮುರಲೀಧರ ಜೋಗಿ, ಬೆಳ್ಮಣ್ ಕಾರ್ಕಳ ತಾಲೂಕು(ವಿವಿಧ ಕಲಾಕ್ಷೇತ್ರ), ದಾಮೋದರ ಆಚಾರ್ಯ, ಯರ್ಲಪಾಡಿ ಕಾರ್ಕಳ ತಾಲೂಕು (ಕೃಷಿ, ಸಮಾಜಸೇವೆ), ಭಾಸ್ಕರ ಪಾಣ, ಅಂಪಾರು ಕುಂದಾಪುರ ತಾಲೂಕು (ದೈವಾರಾಧನೆ), ಲಕ್ಷ್ಮಿನಾರಾಯಣ ರಾವ್, ಕಾಪು (ಸಮಾಜ ಸೇವೆ).

ಕೋಡಿ ಗಂಗಾಧರ ಪೂಜಾರಿ, ಹಂಗಳೂರು ಕುಂದಾಪುರ ತಾಲೂಕು (ಕೃಷಿ), ಗುಂಡು ಪೂಜಾರಿ, ಸಾಲಿಗ್ರಾಮ ಉಡುಪಿ ತಾಲೂಕು (ಜಾನಪದ, ಹೌಂದೇರಾಯನ ಒಲಗ), ಲಕ್ಷ್ಮಣ ಸೇರಿಗಾರ, ಎಲ್ಲೂರು ಕಾಪು ತಾಲೂಕು (ಸಂಗೀತ, ನಾಗಸ್ವರ ಮತ್ತು ಸ್ಯಾಕ್ಸೋಫೋನ್ ವಾದನ), ಬಿ.ವಾಸುದೇವ ಬನ್ನಂಜೆ ಉಡುಪಿ (ಜಾನಪದ ಕ್ಷೇತ್ರ), ಡಾ.ಸಂದೀಪ ಶೆಣೈ, ಕುಂಜಿಬೆಟ್ಟು ಉಡುಪಿ (ವೈದ್ಯಕೀಯ), ಬೂಬ ಪರವ, ಕೌಡೂರು ಬೈಲೂರು ಕಾರ್ಕಳ ತಾಲೂಕು (ದೈವಾರಾಧನೆ), ಉಮೇಶ ಪೂಜಾರಿ, ಚಾಂತಾರು ಬ್ರಹ್ಮಾವರ ತಾಲೂಕು (ಸಮಾಜ ಸೇವೆ), ಶ್ರೀಕಾಂತ ಆಚಾರ್ಯ, ಹೊಸಾಳ ಬ್ರಹ್ಮಾವರ ತಾಲೂಕು (ಶಿಲ್ಪಕಲೆ), ಶೇಖರ ತಮಟೆಹಕ್ಲು ಶೆಟ್ಟಿ, ಕಮಲಶಿಲೆ ಕುಂದಾಪುರ ತಾಲೂಕು (ಯಕ್ಷಗಾನ), ಡಾ.ಗೋಪಾಲ ಪೂಜಾರಿ, ಶಿವಪುರ ಹೆಬ್ರಿ ತಾಲೂಕು (ವೈದ್ಯಕೀಯ ಸೇವೆ).

ಶಾಲಿನಿ ರಾಜೇಶ್ ಶೆಟ್ಟಿ, ಬ್ರಹ್ಮಗಿರಿ ಉಡುಪಿ (ಕ್ರೀಡಾ ಕ್ಷೇತ್ರ), ಡಾ.ಕೆ. ಪ್ರಶಾಂತ್ ಶೆಟ್ಟಿ, ಕಾಪು (ವೈದ್ಯಕೀಯ, ಸಮಾಜಸೇವೆ), ಗೋವಿಂದ ಭಂಡಾರಿ, ಅಂಬಲಪಾಡಿ ಉಡುಪಿ (ಸಮಾಜ ಸೇವೆ), ರಮೇಶ ಎಸ್. ತಿಂಗಳಾಯ, ಕೋಡಿಬೆಂಗ್ರೆ ಉಡುಪಿ ತಾಲೂಕು (ಸಮಾಜಸೇವೆ), ವೀಣಾ ಆರ್. ಭಟ್, ವರಂಗ ಹೆಬ್ರಿ ತಾಲೂಕು (ಸಮಾಜ ಸೇವೆ), ಶಿವಾನಂದ ಕೋಟ್ಯಾನ್, ಕಟಪಾಡಿ ಕೋಟೆ ಉಡುಪಿ ತಾಲೂಕು (ಸಾಂಸ್ಕೃತಿಕ, ಸಾಮಾಜಿಕ), ಸಂತೋಷ್ ಕುಮಾರ್, ತೊಟ್ಟಂ ಉಡುಪಿ ತಾಲೂಕು (ಚಿತ್ರಕಲೆ), ರಾಜೇಶ ಆಚಾರ್ಯ, ಸಣ್ಣಕ್ಕಿಬೆಟ್ಟು ಹೆರ್ಗ ಉಡುಪಿ (ರಂಗಭೂಮಿ), ಸತೀಶ್ ಪೂಜಾರಿ, ಚಿತ್ರಪಾಡಿ ಬ್ರಹ್ಮಾವರ ತಾಲೂಕು (ಸಮಾಜಸೇವೆ), ಡಾ.ಅಂಪಾರು ನಿತ್ಯಾನಂದ ಶೆಟ್ಟಿ, ಅಂಪಾರು ಕುಂದಾಪುರ ತಾಲೂಕು (ಸಂಕೀರ್ಣ).

ನಾಗರಾಜ ಆಚಾರ್ಯ, ಬೈಂದೂರು (ಕೆತ್ತನೆ), ಕೃಷ್ಣ ಉಪ್ಪಿನಕೋಟೆ, ಹಾರಾಡಿ ಬ್ರಹ್ಮಾವರ ತಾಲೂಕು (ಚಲನಚಿತ್ರ, ಸಾಹಿತ್ಯ), ಸಂತೋಷ್, ಇಂದಿರಾನಗರ ಕುಕ್ಕಿಕಟ್ಟೆ ಉಡುಪಿ (ಶಿಲ್ಪಕಲೆ), ಲಕ್ಷ್ಮೀ ಮಚ್ಚಿನ, ಕುಕ್ಕಿಕಟ್ಟೆ ಉಡುಪಿ (ಪತ್ರಿಕೋದ್ಯಮ), ಶಂಕರ ಶೆಟ್ಟಿ, ವರಂಗ ಹೆಬ್ರಿ ತಾಲೂಕು (ಸಮಾಜ ಸೇವೆ), ಪ್ರದೀಪ್ ಹೆಬ್ಬಾರ್, ಚಾರ ಹೆಬ್ರಿ ತಾಲೂಕು (ಯಕ್ಷಗಾನ), ವಿಜಯಕುಮಾರ್, ಹೆಜಮಾಡಿ ಕಾಪು ತಾಲೂಕು (ಸಾಂಸ್ಕೃತಿಕ ಜಾನಪದ ಕಲೆ), ಪ್ರಶಾಂತ್ ಕೆ.ಎಸ್., ಅಂಬಲಪಾಡಿ ಉಡುಪಿ (ಕ್ರೀಡೆ, ಕಲೆ), ಮಹೇಶ್ ಕುಮಾರ್ ಮಂದಾರ್ತಿ, ಮಂದಾರ್ತಿ ಕುಂದಾಪುರ (ಯಕ್ಷಗಾನ), ಸೌಮ್ಯ ಪುತ್ರನ್ ಕಾತ್ಯಾಯಿನಿ, ಗುಂಡಿಬೈಲು ಉಡುಪಿ (ಕನ್ನಡ ಸಾಹಿತ್ಯ).

ರಾಘವೇಂದ್ರ ಕರ್ಕೇರ, ಸಾಸ್ತಾನ ಬ್ರಹ್ಮಾವರ ತಾಲೂಕು (ಯಕ್ಷಗಾನ), ಗಣಪತಿ ಎನ್.ಟಿ., ಮಚ್ಚಟ್ಟು ಗ್ರಾಮ ಕುಂದಾಪುರ ತಾಲೂಕು (ಸಮಾಜ ಸೇವೆ), ಗುರುಪ್ರಸಾದ್ ಭಟ್, ಪಳ್ಳಿ ಕಾರ್ಕಳ ತಾಲೂಕು (ದೇವರ ನರ್ತನ) , ಸುಲೈಮಾನ್ ಮೊಹಮ್ಮದ್ ಬ್ಯಾರಿ, ಬೈಂದೂರು (ಸಮಾಜ ಸೇವೆ), ಪ್ರಸಾದ್ ರಾವ್, ಉಡುಪಿ (ಮಾಧ್ಯಮ ಕ್ಷೇತ್ರ), ಸುಶಾಂತ್, ಚಾಂತಾರು ಬ್ರಹ್ಮಾವರ ತಾಲೂಕು (ಭಗವದ್ಗೀತೆ ಪಠನ), ಸತೀಶ್ ಹೇರೂರು, ಶಂಕರಪುರ ಕಾಪು ತಾಲೂಕು (ಶಿಲ್ಪಕಲೆ), ಅಮಿತಾ, ಬೈಲಾಬೆಟ್ಟು ಬೋಳ ಕಾರ್ಕಳ ತಾಲೂಕು (ಸಂಗೀತ), ಶರಣ್‌ಕುಮಾರ್ ಮಟ್ಟು, ಹೆಜಮಾಡಿ ಕಾಪು ತಾಲೂಕು (ಸಮಾಜ ಸೇವೆ), ನವೀನ್ ಎಂ.ಪೂಜಾರಿ ಕಡೆಕುಂಜ ಕಾರ್ಕಳ ತಾಲೂಕು (ಸಮಾಜ ಸೇವೆ).

ಭಾಸ್ಕರ ಬಂಗೇರ ಕೋಟ್ಯಾನ್, ಪಡುಹಿತ್ಲು ಪಡುಬಿದ್ರಿ ಕಾಪು ತಾಲೂಕು (ದೈವನರ್ತಕ), ಸುದೀಪ್ ಶೆಟ್ಟಿ, ಮಲ್ಯಾಡಿ ಗ್ರಾಮ ಕುಂದಾಪುರ ತಾಲೂಕು (ಕ್ರೀಡಾಕ್ಷೇತ್ರ), ನಯನಾ ಎಂ.ನಾಯ್ಕ್, ಬಂಗ್ಲೆಗುಡ್ಡೆ ಹೊಸಂಗಡಿ ಕುಂದಾಪುರ ತಾಲೂಕು (ಕ್ರೀಡಾಕ್ಷೇತ್ರ), ಸಾನಿಧ್ಯ ಆಚಾರ್ಯ, ಬೈರಂಪಳ್ಳಿ ಹರಿಖಂಡಿಗೆ ಉಡುಪಿ ತಾಲೂಕು (ನೃತ್ಯ, ಅಭಿನಯ).

ಸಂಘ ಸಂಸ್ಥೆಗಳು: ಶ್ರೀನಿಧಿ ಮಹಿಳಾ ಮಂಡಳಿ ಎರ್ಮಾಳು ಕಾಪು ತಾಲೂಕು (ಸಮಾಜ ಸೇವೆ), ಕಲಾಮಯ ಜಾನಪದ ಕಲಾಸಂಘ ಕಾಪು ತಾಲೂಕು (ಜಾನಪದ ಕಲಾತಂಡಮತ್ತು ಸಮಾಜ ಸೇವಾ ತಂಡ), ಅನಂತ ಪದ್ಮನಾಭ ಫ್ರೆಂಡ್ಸ್ ಹೆಬ್ರಿ, (ಸಂಘಸಂಸ್ಥೆ), ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಕಾರ್ಕಳ ತಾಲೂಕು (ಯಕ್ಷಗಾನ), ಬಿಲ್ಲವ ಸಮಾಜ ಸೇವಾ ಸಂಘ, ಕುಂದಾಪುರ (ಸಂಘಸಂಸ್ಥೆ, ಸಮಾಜಸೇವೆ), ಶ್ರೀಬ್ರಹ್ಮ ಬೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿ ಕಡೆಕಾರ್ ಕಿದಿಯೂರು ಉಡುಪಿ (ಯಕ್ಷಗಾನ, ಸಮಾಜ ಸೇವೆ).

ಯುವಜನ ಮಂಡಲ, ಉಪ್ಪೂರು ಬ್ರಹ್ಮಾವರ ತಾಲೂಕು (ಸಮಾಜ ಸೇವೆ), ಕಲಾನರ್ತನ ಡ್ಯಾನ್ಸ್ ಕ್ರೀವ್, ಜನ್ನಾಡಿ ಕುಂದಾಪುರ ತಾಲೂಕು (ನೃತ್ಯ), ಯುವ ವಿಚಾರ ವೇದಿಕೆ, ಕೊಳಲಗಿರಿ ಉಪ್ಪೂರು ಉಡುಪಿ ತಾಲೂಕು (ಸಾಮಾಜಿಕ ಸೇವೆ), ಸುರಭಿ ಬೈಂದೂರು, ಬೈಂದೂರು (ಕಲೆ ಮತ್ತು ಸಾಂಸ್ಕೃತಿಕ), ಶ್ರೀದುರ್ಗಾ ಪರಮೇಶ್ವರಿ ಬಜನಾ ಮಂಡಳಿ, ಆಲ್ಬಾಡಿ ಗ್ರಾಮ ಹೆಬ್ರಿ ತಾಲೂಕು (ಸಮಾಜ ಸೇವೆ, ಧಾರ್ಮಿಕ ಸೇವೆ), ಬೆಳಪು ಸ್ಪೋರ್ಟ್ಸ್ ಕ್ಲಬ್, ಬೆಳಪು ಕಾಪು ತಾಲೂಕು (ಕ್ರೀಡೆ, ಶಿಕ್ಷಣ, ಸಮಾಜಸೇವೆ), ಶ್ರೀ ದುರ್ಗಾಪರಮೇಶ್ವರಿ ಮರಾಟಿ ಸಮುದಾಯ ಕಲಾ ಸಂಘ ಬಾಳೆತೋಟ, ಮುಡು ಅಂಜಾರು ಹಿರಿಯಡ್ಕ ಉಡುಪಿ ತಾಲೂಕು (ಹೋಳಿಕುಣಿತ, ಯಕ್ಷಗಾನ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News