26 ಅರಣ್ಯವಾಸಿಯನ್ನು 30 ದಿನದಲ್ಲಿ ತೆರವಿಗೆ ನಿರ್ದೇಶನ: ಮಹೇಶ್ ನಾಯ್ಕ

Update: 2026-08-10 19:36 IST

ಹೊನ್ನಾವರ: ಅನಧೀಕೃತ ಕಾನೂನುಬಾಹಿರವಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಹೊನ್ನಾವರ ತಾಲೂಕಿನ, ಕೆರವಳ್ಳಿ ಮೇಲಿನ ಮೂಡ್ಕಣಿ ಗ್ರಾಮದ 26 ಅರಣ್ಯವಾಸಿಯನ್ನು 30 ದಿನದಲ್ಲಿ ತೆರವಿಗೆ ಎಕಾರ್ತಿಯ ಆದೇಶದಲ್ಲಿ ನಿರ್ದೇಶನವನ್ನು ಹೊನ್ನಾವರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಳೆದ ತಿಂಗಳ ಜುಲೈ 15 ರಂದು ಮಾಡಿರುವ ಕುರಿತು ತಡವಾಗಿ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ ತಿಳಿಸಿದ್ದಾರೆ.

ಆದೇಶ ಜಾರಿಗೆ ಬಂದ ದಿನದಿಂದ 30 ದಿನಗಳ ಒಳಗೆ ಸದರ ಅತಿಕ್ರಮಣ ಕ್ಷೇತ್ರದಲ್ಲಿನ ಬೆಳೆ, ಕಟ್ಟಡ , ರಚನೆ ಇತ್ಯಾದಿಗಳನ್ನು ತಮ್ಮ ಸ್ವಂತ ವೆಚ್ಚದಿಂದ ಮತ್ತು ಜವಬ್ದಾರಿಯಿಂದ ಅರಣ್ಯ ಪ್ರದೇಶವನ್ನು ತೆರವುಗೊಳಿಸಿ ಹಾಗೂ ಸದರ್ ಪ್ರದೇಶವನ್ನು ಅರಣ್ಯ ಇಲಾಖೆಗೆ ವಹಿಸಿಕೊಡುವಂತೆ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.

ಹೊನ್ನಾವರ ತಾಲೂಕಿನ, ಕೆರವಳ್ಳಿ ಗ್ರಾಮದಲ್ಲಿ 26 ಅರಣ್ಯವಾಸಿಗಳು ಜೀವನಕ್ಕಾಗಿ ಮತ್ತು ವಾಸ್ತವ್ಯಕ್ಕಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಒಟ್ಟು 15 ಗುಂಟೆ ಕ್ಷೇತ್ರವನ್ನು ಅತಿಕ್ರಮಿಸಿ, ಕಾನೂನುಬಾಹಿರವಾಗಿ ಸಾಗುವಳಿ ಮಾಡುತ್ತಿ ರುವುದನ್ನು ಪುರಾವೆ ಆಗಿದೆ ಎನ್ನುವ ಹಿನ್ನಲೆಯಲ್ಲಿ ಮೇಲಿನಂತೆ ಒಕ್ಕಲೆಬ್ಬಿಸುವ ಆದೇಶ ಮಾಡಲಾಗಿದೆ ಎಂಬು ದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನಿಗಧಿತ 30 ದಿನಗಳಲ್ಲಿ ತಮ್ಮ ಸ್ವಂತ ವೆಚ್ಚ ಮತ್ತು ಜವಬ್ದಾರಿಯಿಂದ ತೆರವುಗೊಳಿಸಲು ವಿಫಲವಾದಲ್ಲಿ ವಲಯ ಅರಣ್ಯಾಧಿಕಾರಿ ಹೊನ್ನಾವರ, ಅವರು ಒತ್ತುವರಿ ಪ್ರದೇಶದಲ್ಲಿ ಎಲ್ಲಾ ಚರ ಸ್ಥಿರ ಆಸ್ತಿಗಳಳನ್ನು ತೆರವುಗೊಳಿಸಿ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಒಕ್ಕಲೆಬ್ಬಿಸಲು ತಗಲು ವೆಚ್ಚವನ್ನು ವಲಯ ಅರಣ್ಯಾಧಿಕಾರಿಗಳು ಹೊನ್ನಾ ವರ ಅವರು ನಿಯಮಾನುಸಾರ ನಿರ್ಧರಿಸಿ ಅತಿಕ್ರಮಣದಾರರಿಂದ ವಸೂಲಿ ಮಾಡಲು ಸಹಿತ ಅಂಶವನ್ನು ಸ್ಪಷ್ಟವಾಗಿ ಆದೇಶದಲ್ಲಿ ನಿರ್ದೆಶನ ನೀಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಕ್ಕಲೆಬ್ಬಿಸುಲು ಜುಲೈ 15 ರಂದು ಆದೇಶ ಮಾಡಿದ ಆದೇಶದ ಪ್ರತಿಯನ್ನು ಅರಣ್ಯವಾಸಿಗಳಿಗೆ ತಲುಪಿಸಲು 25 ದಿನ ವಿಳಂಬ ಮಾಡಿರುವುದು ವಿಷಾಧಕರ. ಆದೇಶದ ಪ್ರಕಾರ ಒಕ್ಕಲೆಬಿಸಲು ಅಗಸ್ಟ 14 ರಂದು ಕೊನೆಯ ದಿನವಾ ದರೇ, ಅತಿಕ್ರಮಣದಾರರಿಗೆ ಆದೇಶ ಪ್ರತಿ ತಲುಪಿಸಿರುವುದು ಅಗಸ್ಟ 9 ರಂದು ಎಂದು ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News