ಮುಹಮ್ಮದ್ ಮುಸ್ಲಿಯಾರ್ ಸ್ಮರಣಾರ್ಥ ರಕ್ತದಾನ ಶಿಬಿರ
Update: 2025-08-23 18:47 IST
ದುಬೈ, ಆ.23: ಮರ್ಹೂಂ ಹಾಜಿ ಮುಹಮ್ಮದ್ ಮುಸ್ಲಿಯಾರ್ ಕಡವಿನ ಬಾಗಿಲು ಸ್ಮರಣಾರ್ಥ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಹಯೋಗದಲ್ಲಿ ರಕ್ತದಾನ ಶಿಬಿರವು ದುಬೈಯ ಬೈತ್ ಅಲ್ ಮಜ್ಲಿಸ್ ಕೆಫ್ಟೆರಿಯಾ ರಾಶಿಯಾದಲ್ಲಿ ಶುಕ್ರವಾರ ನಡೆಯಿತು. ಈ ಶಿಬಿರದಲ್ಲಿ 50 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ದುಬೈ ಅಧ್ಯಕ್ಷ ನಝೀರ್ ಬಿಕರ್ನಕಟ್ಟೆ, ಕಾರ್ಯನಿರ್ವಾಹಕರಾದ ಶಂಸುದ್ದಿನ್ ಪಿಲಿಗೂಡು, ಸಮೀರ್ ಕಡವಿನ ಬಾಗಿಲು, ಸದಸ್ಯರಾದ ಹಬೀಬ್ ಪರ್ಲ್ಯ, ಅಬು ಸಿದ್ದೀಕ್, ಅನ್ಸಾರ್ ಬಾಂಬಿಲ ಪಾಲ್ಗೊಂಡಿದ್ದರು.