ಆ.9ರಂದು ಬಿ-ಹೂಮನ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ
ಮಂಗಳೂರು, ಆ.7: ಮಂಗಳೂರಿನ ಬಿ-ಹೂಮನ್ ಚಾರಿಟೇಬಲ್ ಟ್ರಸ್ಟ್ (ರಿ) ಇದರ ವತಿಯಿಂದ 79ನೇ ಸ್ವಾತ್ರಂತ್ರ್ಯೋತ್ಸವದ ಅಂಗವಾಗಿ ವೀರಮರಣ ಹೊಂದಿದ ಸ್ವಾತಂತ್ರ ಸೇನಾನಿಗಳ ಸ್ಮರಣಾರ್ಥ ಸಾವಿರ ದಾನಿಗಳ ಬೃಹತ್ ರಕ್ತದಾನ ಶಿಬಿರ ಆ.9ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಬಿ-ಹ್ಯೂಮನ್ ಚಾರಿಟೇಬಲ್ ಟ್ರಸ್ಟ್ನ ಮಂಗಳೂರು ಘಟಕದ ಅಧ್ಯಕ್ಷ ಜೀಶನ್ ಆಲಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಬಲ ಸಾಮಾಜಿಕ ಸಂಸ್ಥೆಯಾದ ಬಿ-ಹ್ಯೂಮನ್ ಕಳೆದ 10 ವರ್ಷಗಳಿಂದ ಜಾತಿ ಮತ ಭೇದವಿಲ್ಲದೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದೆ. ಇದರ ಆಶ್ರಯದಲ್ಲಿ ಸುಮಾರು 6 ಆಸ್ಪತ್ರೆಗಳ
ಸಹಯೋಗದೊಂದಿಗೆ ಬೆಳಗ್ಗೆ 9:00ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ರಕ್ತದಾನಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಸಾರ್ವಜನಿಕರಿಗೆ ರಕ್ತದಾನದ ಅರಿವು ಮೂಡಿಸಲು ಹಾಗೂ ರಕ್ತದಾನಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ರಕ್ತದಾನ ಮಾಡಿದ ಮೂರು ಮಂದಿ ಸದಸ್ಯರಿಗೆ ಮಧ್ಯಾಹ್ನ 2:30ಕ್ಕೆ ಲಕ್ಕಿ ಡ್ರಾ ಮೂಲಕ ಮೂರು ಬೆಲೆ ಬಾಳುವ ಮೊಬೈಲ್ ಫೋನ್ಗಳನ್ನು ನೀಡಲಾಗುವುದು ಎಂದರು.
ಉದ್ಘಾಟನೆ: ಬೆಳಗ್ಗೆ 8:30ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್, ದ.ಕ.ಜಿಲ್ಲೆಯ ಜಿಲ್ಲಾಧಿಕಾರಿ ದರ್ಶನ್. ಎಚ್.ವಿ, ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ , ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಇತರ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೀಶನ್ ಆಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ-ಹ್ಯೂಮನ್ ಚಾರಿಟೇಬಲ್ ಟ್ರಸ್ಟ್ನ ಚೇರ್ ಮ್ಯಾನ್ ಎಂ. ಮೊಹಮ್ಮದ್ ಷರೀಫ್ ಬೋಳಾರ , ಬಿ-ಹೂಮನ್ ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್ , ಟ್ರಸ್ಟಿ ಇಮ್ರಾನ್ ಹಸನ್, ಗೌರವ ಸಲಹೆಗಾರರಾದ ಅಬ್ಬಾಸ್ ಅಹ್ಮದ್ ಉಚ್ಚಿಲ್ ಮತ್ತು ಇಮ್ಮಿಯಾಜ್ ಜಿ. ಅಹ್ಮದ್, ಶಾಹುಲ್ ಹಮೀದ್ ಉಜಿರೆ ಉಪಸ್ಥಿತರಿದ್ದರು.