×
Ad

ಸಾಹಿತ್ಯ ಸಮ್ಮೇಳನಗಳು ಮಕ್ಕಳಿಗೆ ಪ್ರೇರಣೆ ನೀಡುವ ಕ್ಷೇತ್ರವಾಗಿದೆ: ಸುನಿಲ್ ಕುಮಾರ್

Update: 2023-12-03 22:40 IST

ಕಾರ್ಕಳ: ಸಾಹಿತ್ಯ ಸಮ್ಮೇಳನಗಳು ಮಕ್ಕಳಿಗೆ ಪ್ರೇರಣೆ ನೀಡುವ ಕ್ಷೇತ್ರವಾಗಿದೆ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಕಾರ್ಕಳ ಗಣಿತ ನಗರ ಜ್ಞಾನ ಸುಧ ಕಾಲೇಜು ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಸಮ್ಮೇಳನವನ್ನು  ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರೇರಣೆ,  ಜಾಗೃತಿ , ಹಾಗೂ ಸಾಂಸ್ಕೃತಿಕ ವೈಭವವನ್ನು ಸಾರುವ ಕೆಲಸವಾಗಿದೆ , ಹೊಸ ಪೀಳಿಗೆಯ ಯುವ ಬರಹಗಾರರಿಗೆ  ತಾಲೂಕು  ಬರಹಗಾರರ ಸಮ್ಮೇಳನ ನಡೆಸುವ ಕಾರ್ಯವಾಗಲಿ, ಕಳೆದ ಬಾರಿ ನಡೆದ  ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನವು  ಸರಕಾರವು ಮುಂದುವರೆಸಲಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ, ಹಿರಿಯ ಸಾಹಿತಿ ಸೂಡ ಸದಾನಂದ ಶೆಣೈ ಮಾತನಾಡಿ, ಭಾಷೆ ಹಾಗೂ ಸಾಹಿತ್ಯಗಳು ನಮ್ಮೆಲ್ಲರನ್ನೂ ಒಂದುಗೂಡಿಸುವ ಸಾಧನಗಳು. ಮುಖ್ಯವಾಗಿ ತುಳು, ಕೊಂಕಣಿ, ಬ್ಯಾರಿ ಇತ್ಯಾದಿ ಭಾಷೆಗಳನ್ನು ಆಡುವವರ ಆಶ್ರಯದಲ್ಲಿ ಇಲ್ಲಿ ಕನ್ನಡ ಸಾಹಿತ್ಯಕ್ಕೆ ಬಹಳ ಪ್ರೋತ್ಸಾಹವಿದೆ. ತುಳುನಾಡಿನಲ್ಲಿ ವಿವಿಧ ಭಾಷಿಗರ ನಡುವಿನ ಸಂಪರ್ಕ ಭಾಷೆಯೇ ಕನ್ನಡ. ಮುಂದಿನ ದಿನಗಳಲ್ಲಿ ಕನ್ನಡದ ಸ್ಥಾನವನ್ನು ಇಂಗ್ಲಿಷ್ ಆಕ್ರಮಿಸಿಕೊಳ್ಳದ ಹಾಗೆ ನಾವು ಎಚ್ಚರದಲ್ಲಿರಬೇಕು. ಮಕ್ಕಳ ಸಾಹಿತ್ಯವನ್ನು ಪ್ರೋತ್ಸಾಹಿಸಿದರೆ ಕನ್ನಡವನ್ನು ಉಳಿಸಲು ಸಾಧ್ಯವಾಗುತ್ತದೆ ಎನ್ನುವುದು ನನ್ನ ನಂಬಿಕೆ. ಕನ್ನಡವನ್ನು ಉಳಿಸಿ ಬೆಳೆಸಲು ಸಿದ್ಧರಾಗಬೇಕು ಎಂದರು.

ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ (ರಿ.)ನ ರಾಜ್ಯಾಧ್ಯಕ್ಷ ಡಾ| ರವೀಂದ್ರ ಶೆಟ್ಟಿ, ಬಜಗೋಳಿ ಮಾತನಾಡಿ,ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳ  ಉಳಿಸುವ ಸಲುವಾಗಿ ತಾಲೂಕಿನ ಉತ್ತಮ ಕನ್ನಡ ಶಾಲೆಗಳನ್ನು ಗುರುತಿಸಿ ಸಿರಿಗನ್ನಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗು ವುದು ಎಂದರು.

ಈ ಸಂದರ್ಭದಲ್ಲಿ ಕಾರ್ಕಳದ ಸಾಹಿತಿ ಅವನಿ ಉಪಾದ್ಯಾ ಬರೆದ  ಶ್ರೀ ರಾಮಾಯಣ ಸಿರಿ ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದ ಅಜೆಕಾರು ಪದ್ಮಗೋಪಾಲ್  ಟ್ರಸ್ಟ್ ಅಧ್ಯಕ್ಷ  ಸುಧಾಕರ ಶೆಟ್ಟಿ ರವಿ ಕಾಣದ್ದನ್ನು ಕವಿ ಕಾಣುತ್ತಾನೆ  ‌ಎನ್ನುವುದು ಸಾಹಿತ್ಯವೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಕಳ ಹಿರಿಯ ಸಾಹಿತಿ ದಿವಂಗತ ಎಂ ರಾಮಚಂದ್ರ  ಅವರ  ಹೆಸರಿನಲ್ಲಿ ಬಾಲಕವಿಗಳಿಗೆ  ಹಾಗೂ  , ಸರಳ ಸಜ್ಜನಿಕೆಯ ರಾಜಕಾರಣಿ ದಿವಂಗತ ಎಚ್ ಗೋಪಾಲ ಭಂಡಾರಿ ಯವರ ಹೆಸರಿನಲ್ಲಿ ಕನ್ನಡ ಸಾಹಿತ್ಯದ ಕ್ಷೇತ್ರದಲ್ಲಿ ಸೇವೆಗೈಯುವ  ಸಂಘ ಸಂಸ್ಥೆಗಳನ್ನು ಗುರುತಿಸಿ  ಜ್ಞಾನ ಸುಧಾ ಸಂಸ್ಥೆಯಿಂದ ಪ್ರಶಸ್ತಿ  ನೀಡಲಾಗುವುದು  ಎಂದರು.

ಎಸ್.ಕೆ.ಎಸ್. ಪ್ರೊಜೆಕ್ಟ್ ಪ್ರೈ ಲಿ ಸಂಸ್ಥಾಪಕ ,ಉದ್ಯಮಿ ಸುಜಯ್ ಕುಮಾರ್ ಶೆಟ್ಟಿ, ಎಸ್.ವಿ. ಟಿ ಎಜ್ಯುಕೇಶನ್ ಟ್ರಸ್ಟ್ (ರಿ)ನ ಕಾರ್ಯದರ್ಶಿ ಕೆ.ಪಿ ಶೆಣೈ , ಕಾರ್ಕಳ ವಕೀಲರ ಸಂಘ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ,  ಕಾರ್ಕಳ ರಂಗ ಸಂಸ್ಕೃತಿ ಅದ್ಯಕ್ಷ  ನಿತ್ಯಾನಂದ ಪೈ, ಬೈಲೂರಿನ ಉದ್ಯಮಿ ಸಂತೋಷ ವಾಗ್ಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ ಟಿ. ,ಕಾರ್ಕಳ ತಹಶಿಲ್ದಾರ್ ನರಸಪ್ಪ , ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಪೂರ್ಣಿಮಾ, ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲಾಧ್ಯಕ್ಷ  ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು . ಎಂ ರಾಮ ಚಂದ್ರ  ಅವರ  ಹೆಸರಿನಲ್ಲಿ  ಬಾಲಕವಿಗಳಿಗೆ ನೀಡುವ ಪ್ರಶಸ್ತಿಯನ್ನು ಅವನಿ ಉಪಾದ್ಯಾಯ ಅವರಿಗೆ ನೀಡಲಾಯಿತು.

ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಪ್ರಸ್ತಾವಿತ ಮಾತನಾಡಿ ಸ್ವಾಗತಿಸಿದರು. ಸಂಗೀತ ಕುಲಾಲ್ , ಕಾರ್ಯಕ್ರಮ ನಿರೂಪಿಸಿದರು, ಕಾಲೇಜಿನ  ಸಾರ್ವಜನಿಕ  ಸಂಪರ್ಕ ಅಧಿಕಾರಿ  ಜ್ಯೋತಿ ಪದ್ಮನಾಭ ಬಂಡಿ ಧನ್ಯವಾದ ವಿತ್ತರು.

ಸಮಾರೋಪ ಸಮಾರಂಭ

ಎಸ್.ಕೆ.ಎಫ್. ಮೂಡಬಿದ್ರೆ ಗೋಧಾಮ, ಮುನಿಯಾಲು ಸಂಸ್ಥಾಪಕ  ಡಾ. ರಾಮಕೃಷ್ಣ ಆಚಾರ್, ನಿವೃತ್ತ ಕನ್ನಡ ಉಪನ್ಯಾಸಕ ರಾಮ ಭಟ್, ಸಮ್ಮೇಳನಾಧ್ಯಕ್ಷ   ಸದಾನಂದ ಶೆಣೈ ಸೂಡ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ, ಮುನಿಯಾಲು ಉದಯಕುಮಾರ್ ಶೆಟ್ಟಿ , ಬಿಲ್ಲವ ಸಂಘದ ಅಧ್ಯಕ್ಷ ಡಿ. ಆರ್. ರಾಜು, ಕಾರ್ಕಳ ಡಾ. ಪಿ. ಬಾಲಕೃಷ್ಣ ಆಳ್ವ,  ಲ। ಎನ್. ಎಮ್. ಹೆಗ್ಡೆ, ಲಯನ್ಸ್ ಪೂರ್ವ ಜಿಲ್ಲಾ ಗವರ್ನರ್ ಶ್ರೀ ಅರುಣ್ ಕುಮಾರ್, ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ  ರವೀಂದ್ರ ಹೆಗ್ಡೆ,  ತಾಲೂಕು ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಗುರುದತ್ ಎಂ. ಎನ್.  ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ,  ಮೊದಲಾದವರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹರ್ಷಿಣಿ ಕೆ.  ಬಾಬು ಕೆ., ಇನ್ನಾ ರವೀಂದ್ರ ಕುಮಾರ್‌ , ವೆಲೇರಿಯನ್ ಲೋಬೋ ಸಾಣೂರು , ಬಾಲಕೃಷ್ಣ ಭೀಮಗುಳಿ ಮೋಹನ, ರಮಣ ಆಚಾರ್ ಜನಾರ್ದನ ಆಚಾರ್ಯ ವಸಂತ ಮೂಲ್ಯ ಬೆಳ್ಳಣ್ ಮೊಹಮ್ಮದ್ ಗೌಸ್ ,ಹಾಗೂ ಸಂಘಸಂಸ್ಥೆಗಳಾದ ಛತ್ರಪತಿ ಫೌಂಡೇಶನ್, ಕಾರ್ಕಳ "ಹೊಸಬೆಳಕು” ಕಣಜಾರು ಸನ್ಮಾನಿಸಲಾಯಿತು.

ಗೋಷ್ಠಿ ಗಳು:

ಗೋಷ್ಠಿಯ ಬದುಕಿನ ಸಾಧನೆಗೆ ಸಾಹಿತ್ಯದ ಪ್ರೇರಣೆ ಎಂಬ ವಿಷಯದಲ್ಲಿ ನ್ಯಾಯವಾದಿ ಸಹಾನ ಕುಂದಾರ್ ,   ಗಂಗಾಧರ ಪಣಿಯೂರು, ವಿದ್ಯಾರ್ಥಿ ಗೋಷ್ಠಿ ನಿಧಿಯಲ್ಲಿ ಹೊಸ್ಮನೆ , ತೇಜಸ್ವಿನಿ, ಸಂದರ್ಶಿನಿ, ಕಾರ್ತಿಕ ,,, ಸೌಮ್ಯ ಕುಂದಾರ್, ಅದಿತಿ,  ಸಿಧ್ಧರಾಜ್ , ದೀಕ್ಷಿತ್, ಪ್ರಾರ್ಥನಾ ಪೈ  ಭಾಗವಹಿಸಿದರು.

ಖ್ಯಾತ ಕವಿ ಪ್ರದೀಪ ಹೆಬ್ರಿ ಬರೆದ 511 ನೆ ಕೃತಿ ಶರಣ ಶ್ರೇಷ್ಠರು ಭಾಗ 2. ಲೋಕಾರ್ಪಣೆ ಗೊಳಿಸಿ ದಿಕ್ಸೂಚಿ  ಉಪನ್ಯಾಸ ನೀಡಿದರು.

ಮೆರವಣಿಗೆ:   ಕಾರ್ಕಳ  ಗಣಿತನಗರದ ಜ್ಞಾನ ಸುಧಾ ಸಭಾಂಗಣದಲ್ಲಿ ನಡೆದ ಹತ್ತೊಂಬತ್ತನೆ ಸಾಹಿತ್ಯ ಸಮ್ಮೇಳನದ   ಅದ್ಯಕ್ಷರನ್ನು ದುರ್ಗಾದೇವಿ ಹಿರಿಯ ಪ್ರಾಾಥಮಿಕ ಶಾಲೆಯಿಂದ ಸಮ್ಮೇಳನಾಧ್ಯಕ್ಷರನ್ನು  ಸ್ವಾಗತಿಸಿ,  ಭವ್ಯ ಮೆರವಣಿಗೆ ಯಲ್ಲಿ  ವೇದಿಕೆ ಕರೆ ತರಲಾಯಿತು.. . ನಾಡು, ನುಡಿಯ  ಭಾವಚಿತ್ರ ಹಿಡಿದ ವಿದ್ಯಾರ್ಥಿಗಳು, ಎನ್ ಸಿಸಿ ಕೆಡೆಟ್ ಗಳು,  ಸ್ಕೌಟ್ಸ್ ಗೈಡ್ಸ್ ತಂಡ,  ಕೀಲು ಕುದುರೆ, ವಿವಿಧ ವೇಷ ಭೂಷಣಗಳು, ಚೆಂಡೆವಾದನ, ವಿವಿಧ ಶಿಕ್ಷಣ ಸಂಸ್ಥೆಗಳ ಬ್ಯಾಂಡ್ ಸೆಟ್, ನೃತ್ಯದೊಂದಿಗೆ ಸಾಹಿತಿಗಳು, ಕನ್ನಡ ಶಾಲು ಧರಿಸಿ ಗಣ್ಯರು, ಸಾಹಿತ್ಯಾಭಿಮಾನಿಗಳು, ಸಾರ್ವಜನಿಕರು  ಮೆರವಣಿಗೆಯಲ್ಲಿ  ಸಾಗಿದರು. ವಿದ್ಯಾಸಂಸ್ಥೆಗಳ ವಿವಿಧ ವೇಷಭೂಷಣಗಳು ಮೆರವಣಿಗೆಯಲ್ಲಿದ್ದವು.. ಸಾಹಿತ್ಯಸಕ್ತರರು ಉಪಸ್ಥಿತರಿದ್ದರು.  ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರರ್ಷ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಮೆರವಣಿಗೆಗೆ ಚಾಲನೆ ನೀಡಿದರು.

ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟಿ ಅನಿಲ್ ಕುಮಾರ್ ಜೈನ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಕುಕ್ಕುಂದೂರು ಗ್ರಾಾ. ಪಂ. ಅಧ್ಯಕ್ಷೆ ಉಷಾ ಕೆ., ಜ್ಞಾನಸುಧಾ ಶಿಕ್ಷಣ ಸಂಸ್ಥೆೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ. ಕೊಡವೂರು, ಉಡುಪಿ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೆಶಕಿ ಪೂರ್ಣಿಮಾ, ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಜಿಲ್ಲಾ ಸಾಹಿತ್ಯ ಪರಿಷತ್, ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸೆಕ್ರೆಡ್ ಹಾರ್ಟ್ ಶಾಲೆ , ಜ್ಞಾನ ಸುಧಾ ಸಂಸ್ಥೆಯ ಎನ್ ಸಿಸಿ ಘಟಕ ವಿದ್ಯಾರ್ಥಿಗಳು   ಮೆರವಣಿಗೆ ಯಲ್ಲಿ ಮೆರಗು ನೀಡಿದರು.

ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟಿ ಅನಿಲ್ ಕುಮಾರ್ ಜೈನ್  ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಕನ್ನಡ ದ್ವಜ ಧ್ವಜಾರೋಹಣಗೈದರು. ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷೆ ಉಷಾ ಕೆ., ಉಪಸ್ಥಿತರಿದ್ದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News