×
Ad

‘ತುಳುವೆರೆ ಆಯನೊ ಕೂಟ ಕುಡ್ಲ’ಕ್ಕೆ ಆಯ್ಕೆ

Update: 2023-08-05 19:17 IST

ಶಮಿನಾ ಆಳ್ವ

ಮಂಗಳೂರು: ತುಳು ಭಾಷೆಯ ಸಾಂಸ್ಕೃತಿಕ, ಸಾಮಾಜಿಕ, ಜನಪದ ಮತ್ತು ಸಾಹಿತಿಕ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಿದ ‘ತುಳುವೆರೆ ಆಯನೊ ಕೂಟ ಕುಡ್ಲ’ದ ಪದಾಧಿಕಾರಿಗಳನ್ನು ಅಖಿಲ ಭಾರತ ತುಳು ಒಕ್ಕೂಟದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಸಮಿತಿಯ ಅಧ್ಯಕ್ಷರಾಗಿ ಶಮಿನಾ ಆಳ್ವ ಮುಲ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಹೆಗ್ಡೆ ಪೊಳಲಿ, ಉಪಾಧ್ಯಕ್ಷರಾಗಿ ಸ್ವರೂಪ್ ಅಧ್ಯಯನ ಕೇಂದ್ರದ ಗೋಪಾಡ್ಕರ್, ನಿವೃತ್ತ ವಾಯು ಸೇನೆಯ ಫ್ಲೈಯಿಂಗ್ ಆಫೀಸರ್ ಎಂಬಿ ಕಾನ್, ಯಾದವ ಕೋಟ್ಯಾನ್ ಬೊಂದೆಲ್, ಕಾರ್ಯದರ್ಶಿಯಾಗಿ ಸುಜಿತ್ ಶೆಟ್ಟಿ ಸಾಂತೂರು, ಶಿವಪ್ರಸಾದ್ ಶೆಟ್ಟಿ ಪುತ್ತೂರು, ಪ್ರಜ್ವಲ್ ಆಳ್ವ ಮಂಗಳೂರು, ಕೋಶಾಧಿಕಾರಿಯಾಗಿ ಫ್ಲೇವಿ ಗ್ಲಾಡಿಸ್ ಡಿಮೆಲೊ ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ಅಶೋಕ್ ಶೆಟ್ಟಿ ಸರಪಾಡಿ, ಭೂಷಣ್ ಕುಲಾಲ್, ಕರ್ನೂರು ಶುಭಾಷ್ ರೈ, ವಸಂತ ಶೆಟ್ಟಿ, ಮಾಧವ ಭಂಡಾರಿ, ಸುಂದರ್ ಶೆಟ್ಟಿ ತೌಡುಗೋಳಿ, ಆಶಾ ಶೆಟ್ಟಿ ಅತ್ತಾವರ, ಗೀತಾ ಜೆ. ಹೆಗಡೆ, ಭಾರತಿ ರೈ, ರೋಹಿಣಿ ಬಿ. ಶೆಟ್ಟಿ, ಕುಸುಮಾ ಆರ್. ಶೆಟ್ಟಿ, ಅಮೂಲ್ಯ ಯು.ಶೆಟ್ಟಿ, ರವೀಂದ್ರ ಶೆಟ್ಟಿ ಮುಲ್ಕಿ ಹಾಗೂ ಸಮಿತಿಯ ಸಂಚಾಲಕರಾಗಿ ಡಾ. ರಾಜೇಶ್ ಆಳ್ವ ಆಯ್ಕೆಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News