×
Ad

ಕೇಂದ್ರ ಸಚಿವ ಸಂಪುಟ ಪಟ್ಟಿಯಿಂದ ಸ್ಮೃತಿ ಇರಾನಿ, ಹಾಗೂ ಅನುರಾಗ್ ಠಾಕೂರ್ ಹೆಸರನ್ನು ಕೈಬಿಟ್ಟ ಬಿಜೆಪಿ

Update: 2024-06-09 15:14 IST

ಸ್ಮೃತಿ ಇರಾನಿ / ಅನುರಾಗ್ ಠಾಕೂರ್ (Photo: PTI)

ಹೊಸದಿಲ್ಲಿ: ಕೇಂದ್ರ ಸಚಿವ ಸಂಪುಟ ಪಟ್ಟಿಯಿಂದ ಮಾಜಿ ಸಚಿವರಾದ ಸ್ಮೃತಿ ಇರಾನಿ ಹಾಗೂ ಅನುರಾಗ್ ಠಾಕೂರ್ ಅವರ ಹೆಸರನ್ನು ಬಿಜೆಪಿ ಕೈಬಿಟ್ಟಿದೆ ಎಂದು ವರದಿಯಾಗಿದೆ.

ಇವರಿಬ್ಬರ ಬದಲು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಶಂತನು ಠಾಕೂರ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಶಂತನು ಠಾಕೂರ್ ಅವರು ನರೇಂದ್ರ ಮೋದಿ ಅವರ ಹಿಂದಿನ ಸರಕಾರದಲ್ಲಿ ಬಂದರು, ಸರಕು ಸಾಗಣೆ ಹಾಗೂ ಜಲಮಾರ್ಗ ಖಾತೆಗಳ ರಾಜ್ಯ ಸಚಿವರಾಗಿದ್ದರು. ಪಶ್ಚಿಮ ಬಂಗಾಳದಿಂದ ಗೆಲುವು ಸಾಧಿಸಿರುವ 12 ಮಂದಿ ಸಂಸದರ ಪೈಕಿ ಶಂತನು ಠಾಕೂರ್ ಕೂಡಾ ಒಬ್ಬರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News