×
Ad

ಗುಜರಾತ್ ಸೇತುವೆ ಕುಸಿತ ಪ್ರಕರಣ: ಮೃತರ ಸಂಖ್ಯೆ 15ಕ್ಕೆ ಏರಿಕೆ

Update: 2025-07-10 14:28 IST

Photo credit: PTI

ವಡೋದರ: ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾ ಬಳಿ ಬುಧವಾರ ಸಂಭವಿಸಿದ ಸೇತುವೆ ಕುಸಿತ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಗುರುವಾರ ಮುಂಜಾನೆ ಮತ್ತೆ ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. 

ನದಿಯಲ್ಲಿ ಮುಳುಗಿರುವ ವಾಹನಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ವಡೋದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್, "ನದಿಯಿಂದ ವಾಹನಗಳನ್ನು ಹೊರ ತೆಗೆಯಲು, ನಿರ್ದಿಷ್ಟವಾಗಿ ನದಿಗೆ ಬಿದ್ದಿರುವ ಟ್ರಕ್ ಅನ್ನು ಹೊರ ತೆಗೆಯಲು ತಾತ್ಕಾಲಿಕ ಅಟ್ಟಣಿಗೆಯನ್ನು ನಿರ್ಮಿಸಲಾಗಿದೆ. ಈ ಅಟ್ಟಣಿಗೆ ನದಿಯ ದಡದಿಂದ ಸುಮಾರು 40 ಮೀಟರ್ ದೂರವಿದೆ. ಹೀಗಾಗಿ, ಭಾರಿ ತೂಕದ ಕ್ರೇನ್‌ಗಳಿಗೆ ನದಿಯಿಂದ ವಾಹನಗಳನ್ನು ಹೊರಗೆಳೆಯುವುದು ಸಾಧ್ಯವಾಗಲು ನೆಲದಡಿಯಲ್ಲಿ ಬಲವಾದ ಅಟ್ಟಣಿಗೆಯ ಅಗತ್ಯವಿದೆ" ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News