×
Ad

ಫೆ. 12ರ ವರೆಗೆ ಮಹಾಕುಂಭ ಮೇಳ ಪ್ರದೇಶ ವಾಹನ ರಹಿತ ವಲಯವೆಂದು ಘೋಷಣೆ

Update: 2025-02-11 21:12 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಮಹಾಕುಂಭ ಮೇಳದ ಪ್ರದೇಶಕ್ಕೆ ಫೆಬ್ರವರಿ 12ರ ವರೆಗೆ ಯಾವುದೇ ವಾಹನಗಳು ಪ್ರವೇಶಿಸದಂತೆ ಪ್ರಯಾಗರಾಜ್ ಜಿಲ್ಲಾಡಳಿತ ನಿಷೇಧ ವಿಧಿಸಿದೆ.

ಈ ಪ್ರದೇಶಕ್ಕೆ ಮಂಗಳವಾರ ಬೆಳಗ್ಗೆ 4 ಗಂಟೆಯಿಂದ ವಾಹನಗಳು ಪ್ರವೇಶಿಸದಂತೆ ನಿಷೇಧ ವಿಧಿಸಲಾಗಿದೆ. ಇದರಿಂದಾಗಿ ಮಂಗಳವಾರ ಸಂಜೆ 5 ಗಂಟೆಯಿಂದ ಪ್ರಯಾಗರಾಜ್ ನಗರ ಕೂಡ ವಾಹನ ರಹಿತ ವಲಯವಾಗಿ ಮಾರ್ಪಾಟಾಗಿದೆ.

ಫೆಬ್ರವರಿ 12ರಂದು ಮಾಘಿ ಪೂರ್ಣಿಮಾ ಹಿನ್ನೆಲೆಯಲ್ಲಿ ಈ ನಿರ್ಬಂಧ ಹೇರಲಾಗಿದೆ. ಅದೇ ದಿನ ಪುಣ್ಯ ಸ್ನಾನದ ವರೆಗೆ ಈ ನಿರ್ಬಂಧ ಚಾಲ್ತಿಯಲ್ಲಿರಲಿದೆ ಎಂದು ಪ್ರಯಾಗರಾಜ್ ಜಿಲ್ಲಾಡಳಿತ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News