×
Ad

ಜಮ್ಮುವಿನಲ್ಲಿ 17 ಮಂದಿ ನಿಗೂಢ ಸಾವು ಪ್ರಕರಣ: ಕೀಟನಾಶಕ ಮಳಿಗೆಗಳಿಗೆ ಬೀಗ

Update: 2025-02-06 12:27 IST

Photo credit: PTI

ರಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯಾದ ರಜೌರಿಯಲ್ಲಿನ ಬಧಾಲ್ ಗ್ರಾಮದಲ್ಲಿ ಸಂಭವಿಸಿರುವ 17 ಮಂದಿಯ ಸಾವಿನ ನಿಗೂಢತೆ ಇನ್ನೂ ಮುಂದುವರಿದಿದ್ದು, ಈ ಕುರಿತು ಈವರೆಗೆ ಯಾವುದೇ ಸುಳಿವು ದೊರೆತಿಲ್ಲ. ತನಿಖೆಯ ಭಾಗವಾಗಿ ಜಿಲ್ಲೆಯಲ್ಲಿರುವ ಕೀಟನಾಶಕ ಮಳಿಗೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಮುಂದಿನ ಆದೇಶದವರೆಗೆ ಮಳಿಗೆಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.

ನಿಗೂಢ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ 11 ಮಂದಿ ಚೇತರಿಸಿಕೊಂಡಿದ್ದು, ಅವರನ್ನೆಲ್ಲ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಈ ನಡುವೆ, ಸುಮಾರು 250 ಕೀಟನಾಶಕ ಹಾಗೂ ರಸಗೊಬ್ಬರ ಅಂಗಡಿಗಳನ್ನು ಮುಚ್ಚಿಸಿರುವ ಅಧಿಕಾರಿಗಳು, ಇನ್ನೂ ಎರಡು ದಿನಗಳ ಕಾಲ ಶೋಧ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಬಧಾಲ್ ಗ್ರಾಮವನ್ನು ಇನ್ನೂ ನಿರ್ಬಂಧಿತ ವಲಯದಲ್ಲೇ ಇರಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ 79 ಕುಟುಂಬಗಳನ್ನು ಪ್ರತ್ಯೇಕ ವಾಸದಲ್ಲಿರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News