×
Ad

ರಾಜಸ್ಥಾನದ ಬಳಿಕ ಮಧ್ಯಪ್ರದೇಶದಲ್ಲೂ ಕೆಮ್ಮಿನ ಸಿರಪ್ ಸೇವಿಸಿದ 6 ಮಕ್ಕಳು ಮೃತ್ಯು

ಮಕ್ಕಳಿಗೆ ವಯಸ್ಕರ ಕೆಮ್ಮಿನ ಸಿರಪ್?

Update: 2025-10-02 19:15 IST

ಸಾಂದರ್ಭಿಕ ಚಿತ್ರ |  Credit : freepik.com

 

ಭೋಪಾಲ್: ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ಆರು ಮಕ್ಕಳು ಶಂಕಿತ ಮೂತ್ರಪಿಂಡದ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಮೊದಲ ಪ್ರಕರಣ ಆಗಸ್ಟ್ 24 ರಂದು ದಾಖಲಾಗಿದ್ದು, ಸೆಪ್ಟೆಂಬರ್ 7 ರಂದು ಮೊದಲ ಸಾವು ಸಂಭವಿಸಿದೆ. ತೀವ್ರ ಜ್ವರ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಪ್ರಮುಖ ಲಕ್ಷಣಗಳಾಗಿದ್ದವು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಸಿರಪ್‌ಗಳ ಬಳಕೆಯನ್ನು ತಕ್ಷಣ ನಿಷೇಧಿಸಿದೆ.

ವೈದ್ಯಕೀಯ ತಜ್ಞರು ಓವರ್-ದಿ-ಕೌಂಟರ್ ಕೆಮ್ಮಿನ ಸಿರಪ್‌ಗಳನ್ನು ಮಕ್ಕಳಿಗೆ ನೀಡುವುದು ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದ್ದಾರೆ. “ನಾಲ್ಕು-ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವೈದ್ಯರ ಸಲಹೆ ಇಲ್ಲದೆ ಯಾವುದೇ ಸಿರಪ್ ನೀಡಬಾರದು. ಈ ಔಷಧಿಗಳು ಬಹುತೇಕ ವಯಸ್ಕರ ಬಳಕೆಗೆ ಮಾತ್ರ ಸೂಕ್ತವಾಗಿರುತ್ತವೆ” ಎಂದು ಜೈಪುರ ಮೂಲದ ಶ್ವಾಸಕೋಶ ತಜ್ಞರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News