ಸ್ಪೀಕರ್ ರ ‘ಅಸಲಿ ಶಿವಸೇನೆ ’ತೀರ್ಪು: ಸುಪ್ರೀಂ ಮೊರೆ ಹೋದ ಉದ್ಧವ ಠಾಕ್ರೆ
Update: 2024-01-15 16:51 IST
ಉದ್ಧವ ಠಾಕ್ರೆ | Photo: PTI
ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಕಳೆದ ವಾರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಣದ ಪರವಾಗಿ ತೀರ್ಪು ನೀಡಿದ್ದು, ಇದನ್ನು ಪ್ರಶ್ನಿಸಿ ಉದ್ಧವ ಠಾಕ್ರೆ ಬಣ ನ್ಯಾಯಾಲಯದ ಮೊರೆ ಹೋಗಿದೆ.
ಒಂದು ಕಾಲದಲ್ಲಿ ಶಿವಸೇನೆಯ ಪ್ರಶ್ನಾತೀತ ನಾಯಕನಾಗಿದ್ದ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರು ನಾರ್ವೇಕರ್ ಅವರ ‘ಅಸಲಿ ಶಿವಸೇನೆ ’ನಿರ್ಧಾರವನ್ನು ಪ್ರಶ್ನಿಸಿ ಸೋಮವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ.