ಹಿರಿಯ ಪತ್ರಕರ್ತ, ಸಿಯಾಸತ್ ದಿನಪತ್ರಿಕೆಯ ಸಂಪಾದಕ ಝಹೀರುದ್ದೀನ್ ಅಲಿ ಖಾನ್ ನಿಧನ
Update: 2023-08-07 20:44 IST
ಝಹೀರುದ್ದೀನ್ ಅಲಿ ಖಾನ್
ಹೈದರಾಬಾದ್: ಹಿರಿಯ ಪತ್ರಕರ್ತ ಹಾಗೂ ಹೈದರಾಬಾದ್ ಮೂಲದ ಸಿಯಾಸತ್ ದಿನಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಂಪಾದಕ ಝಹೀರುದ್ದೀನ್ ಅಲಿ ಖಾನ್ ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕ್ರಾಂತಿಕಾರಿ ಕವಿ ಗದ್ದರ್ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಖಾನ್ ತೀವ್ರ ಹೃದಯಾಘಾತಕ್ಕೀಡಾಗಿ ಸ್ಥಳದಲ್ಲೇ ಕುಸಿದು ಬಿದ್ದರು. ಅವರನ್ನು ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ಘೋಷಿಸಿದರು.
ಮಾಧ್ಯಮ ಕ್ಷೇತ್ರದಲ್ಲಿ ಗಣ್ಯ ಹೆಸರಾಗಿದ್ದ ಝಹೀರುದ್ದೀನ್ ಅಲಿ ಖಾನ್ ಅವರು, ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.