ದಾವೂದ್ ಕಾರು ಸುಟ್ಟಾತನಿಗೆ ಬೆದರಿಕೆ

Update: 2016-01-01 18:28 GMT


ಘಾಝಿಯಾಬಾದ್, ಜ. 1: ಭೂಗತ ಪಾತಕಿ ದಾವೂದ್ ಇಬ್ರಾಹೀಂಗೆ ಸೇರಿತ್ತು ಎನ್ನಲಾದ ಕಾರೊಂದನ್ನು ಘಾಝಿಯಾಬಾದ್‌ನಲ್ಲಿ ಸುಟ್ಟುಹಾಕಿರುವ ವ್ಯಕ್ತಿಯೊಬ್ಬರಿಗೆ ಭೂಗತ ಪಾತಕಿಯಿಂದ ಕೊಲೆ ಬೆದರಿಕೆ ಬಂದಿದೆ ಎನ್ನಲಾಗಿದೆ.
ಎರಡು ಅಪರಿಚಿತ ಸಂಖ್ಯೆಗಳಿಂದ ತನಗೆ ಫೋನ್ ಮತ್ತು ಎಸ್‌ಎಂಎಸ್ ಸಂದೇಶಗಳು ಬರುತ್ತಿವೆ. ‘‘ನೀವು ಕಾರನ್ನು ಸುಟ್ಟ ರೀತಿಯಲ್ಲೇ ನಿಮ್ಮನ್ನು ಸುಡಲಾಗುವುದು’’ ಎಂಬುದಾಗಿ ಕರೆ ಮಾಡಿದವರು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದೊಂದಿಗೆ ನಂಟು ಹೊಂದಿರುವ ಸ್ವಾಮಿ ಚಕ್ರಪಾಣಿ ಮಹಾರಾಜ್ ಹೇಳಿದ್ದಾರೆ.
ಮುಂಬೈಯಲ್ಲಿ ಡಿಸೆಂಬರ್ 9ರಂದು ನಡೆದ ಬಹಿರಂಗ ಹರಾಜಿನಲ್ಲಿ ದಾವೂದ್‌ಗೆ ಸೇರಿದ್ದೆನ್ನಲಾದ ಕಾರನ್ನು ಮಹಾರಾಜ್ 32,000 ರೂ.ಗೆ ಪಡೆದುಕೊಂಡಿದ್ದರು.
ತನಗೆ ಗೃಹ ಸಚಿವ ರಾಜ್‌ನಾಥ್ ಸಿಂಗ್ ‘ಝಡ್’ ದರ್ಜೆಯ ಭದ್ರತೆಯನ್ನು ನೀಡುವುದಾಗಿ ಹೇಳಿದ್ದಾರೆ. ಆದರೆ, ತಾನು ಅದನ್ನು ನಿರಾಕರಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News