ಅಕ್ರಮ ಮರಳು ಸಾಗಾಟದ ಲಾರಿಗಳು ವಶಕ್ಕೆ

Update: 2016-01-13 18:49 GMT

ಕೊಣಾಜೆ, ಜ.13: ತೊಕ್ಕೊಟ್ಟು ಕಡೆಯಿಂದ ನಾಟೆಕಲ್ ಮಾರ್ಗವಾಗಿ ಕೇರಳಕ್ಕೆ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಏಳು ಲಾರಿಗಳನ್ನು ಕೊಣಾಜೆ ಪೊಲೀಸರು ನಾಟೆಕಲ್ ಬಳಿ ವಶಕ್ಕೆ ತೆಗೆದುಕೊಂಡಿದ್ದು, ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.

 ತೊಕ್ಕೊಟ್ಟು ಸಮೀಪದ ಕಲ್ಲಾಪಿನಿಂದ ಮರಳನ್ನು ತುಂಬಿಸಿಕೊಂಡು ಲಾರಿಗಳ ಮೂಲಕ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಕೊಣಾಜೆ ಇನ್‌ಸ್ಪೆಕ್ಟರ್ ಅಶೋಕ್ ನೇತೃತ್ವದ ಪೊಲೀಸರ ತಂಡ ಲಾರಿಗಳನ್ನು ತಡೆಹಿಡಿದು ದಾಖಲೆ ಪರಿಶೀಲಿಸಿದಾಗ ಅವರಲ್ಲಿ ಪರ್ಮಿಟ್ ಇರಲಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಪೊಲೀಸರು ಏಳು ಲಾರಿಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳಾದ ನಾಸೀರ್, ಮುಹಮ್ಮದ್, ಮುಹಮ್ಮದ್ ಅಶ್ರಫ್, ನಿಝಾಮುದ್ದೀನ್ ಹಾಗೂ ಶಂಸುದ್ದೀನ್ ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News