ಪಠಾಣ್ಕೋಟ್ ವಾಯುನಲೆ ಮೇಲೆ ದಾಳಿ ನಡೆಸಿದ ಉಗ್ರರು ಪಾಕಿಸ್ತಾನದವರು
Update: 2016-01-14 04:47 GMT
ಲಾಹೋರ್, ಜ.14: ಪಠಾಣ್ಕೋಟ್ ವಾಯುನಲೆ ಮೇಲೆ ದಾಳಿ ನಡೆಸಿದ ಉಗ್ರರು ಪಾಕಿಸ್ತಾನದವರು. ಹತರಾದ ಆರು ಉಗ್ರರು ಆಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದರು ಎಂದು ಪಾಕಿಸ್ತಾನವು ಇದೀಗ ಮೊದಲ ಬಾರಿ ಒಪ್ಪಿಕೊಂಡಿದೆ.
ಪಠಾಣ್ಕೋಟ್ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ವಿದ್ಯಾರ್ಥಿಗಳನ್ನು ಲಾಹೋರ್ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ದಾಳಿಯ ಮೊದಲು ಉಗ್ರರು ನಡೆಸಿದ ಮಾತುಕತೆ ನಡೆಸಿದ ದೂರವಾಣಿ ನಂಬ್ರದ ಮಾಹಿತಿಯನ್ನು ಭಾರತ ನೀಡಿದ ಬಳಿಕ ಪಾಕಿಸ್ತಾನ ಸರಕಾರ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ಈ ವರೆಗೆ ಬಂಧಿತರ ಸಂಖ್ಯೆ 31ಕ್ಕೇರಿದೆ.
ಲಾಹೋರ್ ಯುನಿವರ್ಸಿಟಿ ಆಫ್ ಮ್ಯಾನೇಜ್ಮೆಂಟ್ ಸೈಯನ್ಸ್ನ ವಿದ್ಯಾರ್ಥಿ ಉಸ್ಮಾನ್ ಸರ್ವಾರ್, ಸಹಿವಾಲ್ ಜಿಲ್ಲಾ ಸಂಸ್ಥೆಯ ವಿದ್ಯಾರ್ಥಿ ಸಯೀದ್ ಮುಘಲ್ ಮತ್ತು ಕರಾಚಿ ವಿವಿಯ ಕಾಶಿಫ್ ಜಾನ್ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.