×
Ad

ದಿಲ್ಲಿ ;ಸಮ-ಬೆಸ ಸಂಖ್ಯೆ ಯೋಜನೆಯನ್ನು ರದ್ದುಗೊಳಿಸಲು ಸುಪ್ರೀಂ ನಕಾರ

Update: 2016-01-14 13:31 IST

 ಹೊಸದಿಲ್ಲಿ, ಜ.14: ದಿಲ್ಲಿ ಸರಕಾರ  ವಾಹನಗಳ ಓಡಾಟಕ್ಕೆ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಸಮ-ಬೆಸ ಸಂಖ್ಯೆ  ಯೋಜನೆಯನ್ನು ರದ್ದುಗೊಳಿಸಲು  ಸಾಧ್ಯವಿಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ.
 ಇಂದು ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನನ ನ್ಯಾಯಮೂರ್ತಿ ಟಿಎಸ್ ಠಾಕೂರ್ ನೇತೃತ್ವದ ನ್ಯಾಯಪೀಠ  ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ತಕ್ಷಣ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಇದೊಂದು ಪಬ್ಲಿಕ್‌ ಸ್ಟಂ‌ಟ್‌ ಎಂದು ಅಭಿಪ್ರಾಯಪಟ್ಟಿದೆ.  
ರಾಜಧಾನಿದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ಸರಕಾರ ಜಾರಿಗೆ ತಂದಿರುವ ಈ ಯೋಜನೆಗೆ ಎಲ್ಲರೂ ಸಹಕಾರ  ನೀಡಬೇಕೆಂದು  ಎಂದು ನ್ಯಾಯಾಲಯ ಹೇಳಿದೆ.
ಹದಿನೈದು ದಿನಗಳ ಕಾಲ ಸರಕಾರ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಈ ಯೋಜನೆಯ ಅವಧಿಯು ಶುಕ್ರವಾರಕ್ಕೆ ಕೊನೆಗೊಳ್ಳುತ್ತಿದ್ದು, ಸರಕಾರ ಯೋಜನೆಯನ್ನು ಮುಂದುವರಿಸಲು ಕೇಳಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News