ಮಂಗಳೂರು : ಜ. 30, 31:‘ಸಾಮರಸ್ಯ-2016’ ಶಾಂತಿಗಾಗಿ ಕಲೋತ್ಸವ ಮತ್ತು ಆಹಾರೋತ್ಸವ ಮಂಗಳೂರು,

Update: 2016-01-28 14:41 GMT

ಮಂಗಳೂರು, ಜ. 28: ಕರ್ನಾಟಕ ಕ್ರಿಶ್ಚಿಯನ್ ಎಜ್ಯುಕೇಶನ್ ಸೊಸೈಟಿಯ ಆಶ್ರಯದಲ್ಲಿ ಹೊಸದಿಲ್ಲಿಯ ಇಂಟರ್ ಫೈತ್ ಕೋ ಅಲಿಷನ್ ಫಾರ್ ಪೀಸ್ ಸಂಸ್ಥೆಯ ಸಹಯೋಗದೊಂದಿಗೆ ‘ಸಾಮರಸ್ಯ-2016’ ಶಾಂತಿಗಾಗಿ ಕಲೋತ್ಸವ ಮತ್ತು ಆಹಾರೋತ್ಸವ ಕಾರ್ಯಕ್ರಮ ಜ. 30 ಮತ್ತು 31ರಂದು ಬಲ್ಮಠ ಕಾಸೆಸ್ ಮೈದಾನದಲ್ಲಿ ನಡೆಯಲಿದೆ ಎಂದು ಕಾಸೆಸ್ ಖಜಾಂಚಿ ಡಾ ಎ್. ಅನಿಲ್‌ಕುಮಾರ್ ಹೇಳಿದರು.

   ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಜ. 30ರಂದು ಕಲೋತ್ಸವ- ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. 31ರಂದು ಆಹಾರೋತ್ಸವ ಆಯೋಜಿಸಲಾಗಿದೆ. ಸಾಂಪ್ರದಾಯಿಕ ಮತ್ತು ನಮ್ಮ ಸಂಸ್ಕೃತಿಯ ಆಹಾರವನ್ನು ಸವಿಯಲು ಅವಕಾಶ ಕಲ್ಪಿಸಲಾಗಿದೆ. ತುಳುನಾಡಿನ ಸಸ್ಯಹಾರಿ ಮತ್ತು ಮಾಂಸಾಹಾರಿ ಆಹಾರಗಳು ಆಹಾರೋತ್ಸವದಲ್ಲಿ ಲಭ್ಯವಿದೆ. ಶಾಂತಿ ಸ್ಥಾಪನೆಯ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ವಿವಿಧ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News