ಕೊಲೆ ಪ್ರಕರಣದ ಆರೋಪಿಗಳು ಖುಲಾಸೆ

Update: 2016-01-31 18:42 GMT

ಪುತ್ತೂರು, ಜ.31: ಕುತೂಹಲ ಕೆರಳಿಸಿದ್ದ ಉಮೇಶ್ ರೈ ಕೊಲೆ ಪ್ರಕರಣದ ಆರೋಪಿಗಳನ್ನು ಪುತ್ತೂರು 5ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರ್ದೋಷಿಗಳು ಎಂದು ತೀರ್ಮಾನಿಸಿ ಖುಲಾಸೆಗೊಳಿಸಿದೆ. 2010 ಮಾ.3ರಂದು ಉಮೇಶ್ ರೈ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ದೂರು ದಾಖಲಾಗಿತ್ತು. ಕೆಲ ಸಮಯದ ಬಳಿಕ ಮೂಳೆ ಪತ್ತೆಯಾಗಿ ಪ್ರಕರಣ ತಿರುವು ಪಡೆದುಕೊಂಡಿತ್ತು. 2010 ಸೆ. 23ರಂದು ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಜಯರಾಜ್ ಶೆಟ್ಟಿ, ಅಮ್ಮಣ್ಣ ರೈ, ರಾಮಕೃಷ್ಣ ನಾಯ್ಕಿ, ರಾಮಚಂದ್ರ ನಾಯ್ಕಿ ಆರೋಪಿಗಳೆಂದು ಗುರುತಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News