ಇಂದಿನಿಂದ ಸೀಮೆಎಣ್ಣೆ ಪರವಾನಿಗೆ ವಿತರಣೆ

Update: 2016-02-17 18:51 GMT

ಕಾಸರಗೋಡು, ಫೆ.17: ತಾಲೂಕಿನಲ್ಲಿ ಕೃಷಿಗೆ ಸಂಬಂಧಿಸಿ ಸೀಮೆಎಣ್ಣೆ ಪರವಾನಿಗೆಯನ್ನು ಫೆ.18ರಿಂದ ಬೆಳಗ್ಗೆ 10:30ರಿಂದ ಸಂಜೆ 3 ಗಂಟೆಯ ತನಕ ಫಲಾನುಭವಿಗಳಿಗೆ ವಿತರಿಸಲಾಗುವುದು. ಫೆ.18ರಂದು ಬೇಡಡ್ಕ, ಕುತ್ತಿಕೋಲ್ ಗ್ರಾಪಂ ಕಚೇರಿ, ಮುಳಿಯಾರ್ ಕೃಷಿ ಭವನ, (ಚೆಂಗಳ, ಮುಳಿಯಾರು ಪಂಚಾಯತ್), ಕಾರಡ್ಕ ಕೃಷಿ ಭವನ (ದೇಲಂಪಾಡಿ, ಕಾರಡ್ಕ, ಬೆಳ್ಳೂರು ಗ್ರಾಪಂ), 19ರಂದು ಮಧೂರು ಕೃಷಿ ಭವನ, ಚೆಮ್ನಾಡ್ ಗ್ರಾಪಂ ಕಚೇರಿ, ಕಾಸರಗೋಡು ತಾಲೂಕು ವಿತರಣಾ ಕಚೇರಿ (ಕಾಸರಗೋಡು ನಗರಸಭೆ, ಮೊಗ್ರಾಲ್ ಪುತ್ತೂರು ಗ್ರಾಪಂ), ಬದಿಯಡ್ಕ ಕೃಷಿ ಭವನ (ಬದಿಯಡ್ಕ, ಕುಂಬ್ದಾಜೆ ಗ್ರಾಪಂ)ದಲ್ಲಿ ವಿತರಿಸಲಾಗುವುದು. ಅರ್ಜಿ ಸಲ್ಲಿಸಿದ ಫಲಾನುಭವಿಗಳು ಪಡಿತರ ಚೀಟಿ, ಕೃಷಿ ಭವನದಿಂದ ಲಭಿಸಿದ ಟೋಕನ್, ಪರ್ಮಿಟ್ ಬೆಲೆಯಾದ 30 ರೂ. ಪಾವತಿಸಿ ಪರ್ಮಿಟ್ ಪಡೆದುಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News