×
Ad

ಜೈಪುರದ ಕಾರ್ಮಿಕನ ಮಗನನ್ನು ಐಪಿಎಲ್ ಒಂದೇ ದಿನದಲ್ಲಿ ಕೋಟ್ಯಾಧೀಶ ಮಾಡಿತು!

Update: 2016-02-20 18:02 IST

 ಐಪಿಎಲ್-9ರ ಹರಾಜಿನಲ್ಲಿ ಕೆಲವು ಯುವ ಆಟಗಾರರು ದುಬಾರಿ ಬೆಲೆಯ ಕಾರಣದಿಂದಾಗಿ ಚರ್ಚೆಯ ವಸ್ತುವಾಗಿದ್ದಾರೆ. ಇವರಲ್ಲಿ ನಾಥೂ ಸಿಂಗ್ ಒಬ್ಬರು. ಒಬ್ಬ ಕಾರ್ಮಿಕನ ಪುತ್ರ ನಾದ ನಾಥೂ ಒಂದೇ ದಿವಸದಲ್ಲಿ ಕೋಟ್ಯಾಧಿಪತಿ ಆದ ಆಟಗಾರರ ಸಾಲಿಗೆ ಸೇರಿದ್ದಾರೆ. ಜೈಪುರದಲ್ಲಿ ಪುಟ್ಟದಾದೊಂದು ಮನೆಯಲ್ಲಿ ವಾಸಿಸುವ ನಾಥೂ ಸಿಂಗ್‌ರ ಇಚ್ಛೆಯೇ ಹಣ ಸಂಪಾದಿಸಿ ದೊಡ್ಡ ಮನೆ ಖರೀದಿಸಬೇಕು. ತನ್ನ ತಂದೆ- ಚಿಕ್ಕ ತಮ್ಮ ಸುಖವಾಗಿರುವಂತಾಗಬೇಕು ಎಂದು. ರಾಹುಲ್ ದ್ರಾವಿಡ್‌ರ ಶೋಧನೆ ಎನ್ನಲಾದ ಈ ವೇಗದ ಎಸೆತಗಾರನನ್ನು ಮುಂಬೈ ಇಂಡಿಯನ್ಸ್ ಮೂರು ಕೋಟಿ ರೂ.ಗೆ ಖರೀದಿಸಿದೆ. ಐಪಿಎಲ್-9 ಹರಾಜಿನಲ್ಲಿ ಇಪ್ಪತ್ತು ವರ್ಷದ ನಾಥೂಸಿಂಗ್ ದೊಡ್ಡ ಹೆಸರಾಗಿ ಪರಿವರ್ತನೆಯಾದರು. ಫ್ಯಾಕ್ಟರಿಯೊಂದರಲ್ಲಿ ದುಡಿಯುವ ವ್ಯಕ್ತಿಯೊಬ್ಬರ ಪುತ್ರನಿಗೆ 3.2 ಕೋಟಿ ರೂ. ಹರಾಜಿನಲ್ಲಿ ನೀಡಲಾಯಿತು. ಅತ್ತ ಐಪಿಎಲ್‌ನ ಹರಾಜು ಬಗ್ಗೆ ಗೊತ್ತಿಲ್ಲದ ತಂದೆ ತನ್ನ ಕೆಲಸದಲ್ಲಿ ಬಿಸಿಯಾಗಿದ್ದರಲ್ಲದೆ ಅವರಿಗೆ ಇಂತಹ ಯಾವ ವಿಷಯವೂ ಗೊತ್ತಿರಲಿಲ್ಲ.

 ರಾಜಸ್ಥಾನ ಕ್ರಿಕೆಟ್ ತಂಡದ ವೇಗದ ಎಸೆತಗಾರ ನಾಥೂ ಸಿಂಗ್ 145 ಕಿ.ಮೀ. ವೇಗದಲ್ಲಿ ಎಸೆತಗಳನ್ನು ನೀಡಲು ಸಮರ್ಥರಿದ್ದಾರೆ. ಚೆನ್ನೈ ಎಂಆರ್‌ಎಫ್ ಪೇಸ್ ಅಕಾಡಮಿಯಲ್ಲಿ ಗ್ಲೆನ್ ಮೆಕ್‌ಗ್ರಾತ್‌ರಿಂದ ಬೌಲಿಂಗ್ ತರಬೇತಿ ಪಡೆದಿದ್ದಾರೆ. ನಾಥೂ ಸಿಂಗ್ ಕಳೆದ ವರ್ಷ ರಣಜಿಗೆ ಪಾದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿಯೇ ದಿಲ್ಲಿಯ ವಿರುದ್ಧ 87ರನ್‌ಗೆ ಏಳು ವಿಕೆಟ್ ಪಡೆದಿದ್ದರು.

ಆನಂತರ ಟೆಸ್ಟ್ ಸರಣಿಗೆ ಮುಂಚಿನ ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯದ ವಿರುದ್ಧ ಅಧ್ಯಕ್ಷರ ಇಲೆವೆನ್‌ಗೆ ಆಯ್ಕೆಯಾದರು. ನಾಥೂ ಟಿ-20 ಯಲ್ಲಿ ತುಂಬ ಯಶಸ್ವಿ ಬೌಲರ್ ಆಗಿದ್ದಾರೆ.ಹನ್ನೊಂದು ಪಂಧ್ಯಗಳಿಂದ 21 ವಿಕೆಟ್ ಸಂಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News