ಬರದಿಂದ ಕಂಗೆಟ್ಟು ವಿವಾಹ ನಿರಾಕರಿಸುತ್ತಿರುವ ಯುವತಿಯರು!
Update: 2016-02-28 23:52 IST
ಮಹಾರಾಷ್ಟ್ರ, ಫೆ.28: ಕಳೆದ ನಾಲ್ಕೈದು ವರ್ಷಗಳಿಂದ ಭೀಕರ ಬರಗಾಲದಿಂದ ಕಂಗೆಟ್ಟು, ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ವರುಲ್ ತಾಂಡ ಎಂಬ ಗ್ರಾಮದ ಬಂಜಾರಾ ಸಮುದಾಯದ ಸುಮಾರು 25 ಯುವತಿಯರು ಮದುವೆಯಾಗಲು ನಿರಾಕರಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.