ಕಾಸರಗೋಡು ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ
Update: 2016-02-29 18:47 GMT
ಕಾಸರಗೋಡು, ಫೆ.29: ಕಾಸರಗೋಡು ನೂತನ ಜಿಲ್ಲಾಧಿಕಾರಿ ಯಾಗಿ ಇ.ದೇವದಾಸನ್ ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಮೂರೂವರೆ ವರ್ಷಗಳು ಇಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ಪಿ.ಎಸ್.ಮುಹಮ್ಮದ್ ಸಗೀರ್ ಅವರು ಅಧಿಕಾರ ಹಸ್ತಾಂತರಿಸಿದರು.
2004ರಲ್ಲಿ ಐಎಎಸ್ ಪೂರ್ಣಗೊಳಿಸಿದ ಇ.ದೇವದಾಸನ್ರವರು ಭೂ ಕಂದಾಯ ಆಯುಕ್ತ, ಭೂರಹಿತರಿಲ್ಲದ ಕೇರಳ ಯೋಜನೆಯ ವಿಶೇಷ ಅಧಿಕಾರಿ, ಇಡುಕ್ಕಿ ಜಿಲ್ಲಾಧಿಕಾರಿ, ಕಣ್ಣೂರು ವಿಮಾನ ನಿಲ್ದಾಣ ವಿಶೇಷ ಅಧಿಕಾರಿ ಮೊದಲಾದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕೇರಳ ರಾಜ್ಯ ಸಹಕಾರಿ ಬ್ಯಾಂಕ್ ಮ್ಯಾನೇಜಿಂಗ್ ನಿರ್ದೇಶಕ, 1993ರಿಂದ ಕೋಝಿಕ್ಕೋಡ್, ಕಣ್ಣೂರು, ವಯನಾಡು ಜಿಲ್ಲೆಗಳಲ್ಲಿ ಉಪಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು ತಲಶ್ಯೇರಿ ನಿವಾಸಿಯಾಗಿದ್ದಾರೆ.