ಮುಂಡಗೋಡ : 25 ಸಾವಿರ ಮೌಲ್ಯದ ಕಟ್ಟಿಗೆ ವಶ

Update: 2016-03-01 10:51 GMT

ಮುಂಡಗೋಡ : ಅರಣ್ಯ ಇಲಾಖೆಯಿಂದ ಕಾರ್ಯಚರಣೆ ಸುಮಾರು 25 ಸಾವಿರ ರೂ ಗಳ ಕಟ್ಟಿಗೆ ವಶಪಡಿಸಿಕೊಂಡ ಘಟನೆ ತಾಲೂಕಿನ ಚೌಡಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.


ಖಚಿತ ಮಾಹಿತಿ ಆಧರಿಸಿ ರೇಂಜರ ವಿರೇಶ ಕಬ್ಬಿನ ಮಾರ್ಗದರ್ಶನಲ್ಲಿ ವನಪಾಲಕರಾದ ಶ್ರೀಕಾಂತ ವರ್ಣೇಕರ, ಡಿ.ಬಿ.ಪಠಾಣ, ಗಾರ್ಡಗಳಾದ ಮಂಜುನಾಥ ಮರಿಬಸವನಗೌಡರ ಹಾಗು ಮಾಲತೇಶ ಪಟ್ಟೇದ ಕಟ್ಟಿಗೆ ಬಚ್ಚಿಟ್ಟಿದ್ದ ಮನೆ ಮೇಲೆ ದಾಳಿ ನಡೆಸಿ ಸುಮಾರು 17 ಪೋಲ್ಸ ಕಟ್ಟಿಗೆಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಂಕರಪ್ಪ ಕೊಪ್ಪದ ಹಾಗು ಸುಭಾಸ ಕೊಪ್ಪದ ಆರೋಪಿಗಳೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News