ಬಿಜೆಪಿಯವರು ಕಸ ಹೆಕ್ಕುವ ಕೆಲಸ ಮಾಡುತ್ತಿದ್ದಾರೆಯೇ?
ಮೊನ್ನೆ ಸೋಮವಾರ ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನದೇವ್ ಅಹುಜಾ ಎಂಬವರಿಗೆ ದಿಲ್ಲಿಯ ಜೆಎನ್ಯು ಕ್ಯಾಂಪಸ್ಸಿನ ಕಸದ ತೊಟ್ಟಿಯಲ್ಲಿ ಪ್ರತೀ ದಿನ ಏನೆಲ್ಲ ಕಂಡು ಬರುತ್ತಿದೆ ಎಂಬ ದೊಡ್ಡ ಪಟ್ಟಿ ಕೊಟ್ಟಿದ್ದಾರೆ. ಪ್ರತೀ ದಿನ ಹತ್ತು ಸಾವಿರ ಸಿಗರೆಟ್ ತುಂಡು, ನಾಲ್ಕು ಸಾವಿರ ಬೀಡಿ ತುಂಡು, 50 ಸಾವಿರ ಬೀಫ್-ಎಲುಬಿನ ತುಂಡು, ಎರಡು ಸಾವಿರ ಚಿಪ್ಸ್ ತೊಟ್ಟೆ, ಮೂರು ಸಾವಿರ ಬಿಯರ್ ಕ್ಯಾನ್, ಎರಡು ಸಾವಿರ ಖಾಲಿ ಶರಾಬು ಬಾಟಲಿ, ಇವೆಲ್ಲಕ್ಕಿಂತ ಮಿಗಿಲಾಗಿ ಮೂರು ಸಾವಿರ ನಿರೋಧ್ ಮತ್ತು ಐನೂರು ಗರ್ಭಪಾತ ಇಂಜೆಕ್ಷನ್, ಇವಿಷ್ಟ್ಟು ಅಹುಜಾರಿಗೆ ಸಿಕ್ಕಿವೆ ಎಂದು ಪತ್ರಿಕಾ ಹೇಳಿಕೆಯೂ ಕೊಟ್ಟಿದ್ದಾರೆೆ. ಮೂಲತಃ ಈ ಅಹುಜಾ ಜೀವನದಲ್ಲೆಂದೂ ಕಾಲೇಜು ಕಟ್ಟೆ ಹತ್ತಿಲ್ಲ, ಇವರು ಕೇವಲ ಮೆಟ್ರಿಕ್ ಫೇಲ್. ಇವರು ದಸರೆಯ ರಾಮ್-ಲೀಲಾದಲ್ಲಿ ಪ್ರತಿ ವರ್ಷ ಕೇವಲ ರಾವಣನ ಪಾತ್ರ ಮಾತ್ರ ಮಾಡುವುದಂತೆ. ಆದರೂ ಇವರಿಗೆ ದಿಲ್ಲಿ ಜೆಎನ್ಯು ವಿಶ್ವವಿದ್ಯಾನಿಲಯದೊಳಗಿನ ಮೂಲೆ ಮೂಲೆ ಗೊತ್ತಂತೆ. ಬಿಜೆಪಿಯ ಅರೆ-ಸಾಕ್ಷರ ಕಾಲಾಳುಗಳು ಕೊಡುವ ಇಂತಹ ಶತಮೂರ್ಖ ಹೇಳಿಕೆಗಳಿಂದ, ಬಿಜೆಪಿ ದೇಶ-ವಿದೇಶಗಳಲ್ಲಿ ನಗೆ ಪಾಟಲಿಗೀಡಾಗುತ್ತಿದೆ.
ಚೀರಾಟ ಕೂಗಾಟ ಒದರಾಟಗಳಿಗೆ ಕುಪ್ರಸಿದ್ಧನಾದ ಬೊಬ್ಬೆಶೂರ ಅರ್ಣಬ್ ಗೋಸ್ವಾಮಿಯಂತೆ ಈಗ ಇಡೀ ಭಾರತವೇ ಬಿಜೆಪಿ ಅಧ್ಯಕ್ಷರಿಗೆ ಕೇಳುತ್ತಿದೆ- ಈ ರಾಜಸ್ಥಾನಿ ಗ್ಯಾನದೇವ್ ಅಹುಜಾ ನಮ್ಮೂರಿನ ಪ್ಲಾಸ್ಟಿಕ್ ಕಸ ಹೆಕ್ಕುವ ಬಡ ಹುಡುಗರಂತೆ ಜೆಎನ್ಯು ಕ್ಯಾಂಪಸ್ಸಿನಲ್ಲಿ ಕಸ ಹೆಕ್ಕುವ ಕೆಲಸವನ್ನೂ ಮಾಡುತ್ತಿದ್ದಾರೆಯೇ?
ಜೆಎನ್ಯುನಲ್ಲಿ ತನ್ನ ತಂಗಿಯರ ಹಾಗೂ ಮಗಳಂದಿರೊಂದಿಗೆ ಕೆಟ್ಟ ಕೆಲಸ ಮಾಡಲು ಈ ನಿರೋಧ್ಮತ್ತು ಗರ್ಭಪಾತ ಇಂಜೆಕ್ಷನ್ ಉಪಯೋಗಿಸಲಾಗುತ್ತಿದೆ.ಆದುದರಿಂದ ತನಗೆ ತುಂಬಾ ಸಿಟ್ಟು ಬರುತ್ತಿದೆ ಎಂದು ಅಹುಜಾ ಆರ್ಭಟಿಸಿದ್ದಾರೆೆ. ಆದರೆ ಅವರು ತನ್ನ ತಂಗಿಯರ ಮತ್ತು ಮಗಳಂದಿರೊಂದಿಗೆ ಕೆಟ್ಟ ಕೆಲಸ ಮಾಡುತ್ತಿರುವವರು ತನ್ನ ತಮ್ಮಂದಿರು ಮತ್ತು ಮಗಂದಿರು ಎಂಬುದನ್ನು ಮರೆತು ಬಿಟ್ಟಿದ್ದಾರೆ. ಇದರ ಅರ್ಥ ಜೆಎನ್ಯುನಲ್ಲಿ ಗಂಡು ಹುಡುಗರು ಕೆಟ್ಟ ಕೆಲಸ ಮಾಡಿದರೆ ನಡೆಯುತ್ತದೆ. ಆದರೆ ಹೆಣ್ಣು ಹುಡುಗಿಯರು ಕೆಟ್ಟ ಕೆಲಸ ಮಾಡಿದರೆ ಅಹುಜಾಗೆ ಸಿಟ್ಟು ಬರುತ್ತದೆ. ಇದುವೇ ಬಿಜೆಪಿಯವರ ಮನುವಾದಿ ಮನಸ್ಥಿತಿ. ಇನ್ನು ಅವರು ಬೀಫ್-ಎಲುಬು ಮತ್ತು ಮಟನ್-ಎಲುಬು ಪ್ರತ್ಯೇಕಿಸುವ ಕಲೆ ಎಲ್ಲಿಂದ ಕಲಿತರೋ ಗೊತ್ತಿಲ್ಲ.
ಈಗ ಬಂದಿರುವ ಸುದ್ದಿಯಂತೆ ಬಿಜೆಪಿಯವರು ದೇಶದೆಲ್ಲೆಡೆ ಕಸದ ತೊಟ್ಟಿಯಿಂದ ನಿರೋಧ್ಗಳನ್ನು ಹೆಕ್ಕಿ ಅವನ್ನು ಸ್ವಚ್ಛಗೊಳಿಸಿ ಮತ್ತೆ ಪ್ಯಾಕ್ ಮಾಡಿ ರಾಜಸ್ಥಾನ ಮತ್ತು ಗುಜರಾತ್ನಲ್ಲಿ ಮಾರುತ್ತಾರಂತೆ. ಕಾರಣ ವ್ಯಾಪಾರಿ ಬುದ್ಧಿಯ ಗುಜರಾತಿ ಮತ್ತು ರಾಜಸ್ಥಾನಿಗಳು ಅರ್ಧ ಕ್ರಯಕ್ಕೆ ಸಿಗುವ ನಿರೋಧ್ಗಳಿಗೆ ಮುಗಿಬೀಳುತ್ತಾರಂತೆ....(???) ಇದು ನಿಜವಾದ ದೇಶಭಕ್ತಿ.!!! -ರಾಮಕೃಷ್ಣ ಕುಲಾಲ್