ಮೊರಾದಾಬಾದ್ನಲ್ಲಿ ವೇದಿಕೆ ಕುಸಿತ, ವರುಣ್ ಗಾಂಧಿ ಪಾರು
Update: 2016-03-13 23:41 IST
ಮೊರಾದಾಬಾದ್,ಮಾ.13: ರವಿವಾರ ಇಲ್ಲಿ ತನ್ನ ಬೆಂಬಲಿಗರಿಂದ ಕಿಕ್ಕಿರಿದು ತುಂಬಿದ್ದ ತಾತ್ಕಾಲಿಕ ವೇದಿಕೆಯು ಕುಸಿದು ಬಿದ್ದು ಸಂಭವಿಸಿದ ಅವಘಡದಲ್ಲಿ ಸಂಸದ ವರುಣ್ ಗಾಂಧಿ ಅವರು ಗಾಯಗೊಳ್ಳದೆ ಪಾರಾಗಿದ್ದಾರೆ.
ಛಾಜ್ಲೆಟ್ನಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವರುಣ್ ಮೊರಾದಾಬಾದ್-ಹರಿದ್ವಾರ ಹೆದ್ದಾರಿಯಲ್ಲಿನ ಪೀಲಿ ಕೋಠಿ ಚೌಕಿಯಲ್ಲಿ ಸ್ವಲ್ಪ ಕಾಲ ತಂಗಿದ್ದರು. ಸ್ಥಳೀಯ ಸಂಸದ ಸರ್ವೇಶ್ ಕುಮಾರ್ ಅವರು ವರುಣ್ಗೆ ಸ್ವಾಗತ ಸಮಾರಂಭವನ್ನು ಏರ್ಪಡಿಸಿದ್ದರು.
ವೇದಿಕೆಯು ಕುಸಿದು ಬಿದ್ದಾಗ ವರುಣ್ ಜೊತೆ ಕುಮಾರ್ ಮತ್ತು ಮೊರಾದಾಬಾದ್ ಮೇಯರ್ ವೀಣಾ ಅಗರವಾಲ್ ಅವರೂ ಇದ್ದರು.
ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದರು.