ಕ್ಲಾಕ್ ಟವರ್ ವೃತ್ತಕ್ಕೆ ಕೆ.ಎನ್. ಟೇಲರ್ ಹೆಸರನ್ನಿಡಲು ಒತ್ತಾಯಿಸಿ ಧರಣಿ

Update: 2016-03-16 18:54 GMT

ಮಂಗಳೂರು: ನಗರದ ಪುರಭವನದ ಎದುರಿನಲ್ಲಿರುವ ಕ್ಲಾಕ್ ಟವರ್ ವೃತ್ತಕ್ಕೆ ತುಳು ಚಲನಚಿತ್ರ ನಟ ಕೆ.ಎನ್ ಟೇಲರ್ ಹೆಸರನ್ನಿಡುವಂತೆ ಮತ್ತು ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಇಂದು ತುಳುನಾಡ ರಕ್ಷಣಾ ವೇದಿಕೆಯಿಂದ ಪುರಭವನದ ಎದುರು ಇರುವ ವೃತ್ತದಲ್ಲಿ ಧರಣಿ ನಡೆಯಿತು. ಧರಣಿಯಲ್ಲಿ ಕೆ.ಎನ್.ಟೇಲರ್ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಕನ್ನಡ ಚಿತ್ರರಂಗದ ನಾಯಕರ ಹೆಸರಿನಲ್ಲಿ ಈಗಾಗಲೇ ಹಲವೆಡೆ ಸ್ಮಾರಕ ನಿರ್ಮಾಣವಾಗಿದೆ. ಪುರಭವನದ ಎದುರು ಇರುವ ವೃತ್ತಕ್ಕೆ ತುಳು ಚಿತ್ರರಂಗದಲ್ಲಿ ಸಾಧನೆ ಮಾಡಿದ ಕೆ.ಎನ್.ಟೇಲರ್‌ರ ಹೆಸರನ್ನಿಡುವಂತೆ ಆಗ್ರಹಿಸಿದರೂ ಮನಪಾ, ಸರಕಾರ ಗಮನಹರಿಸಿಲ್ಲ. ಅವರಿಗೆ ಗೌರವವಾಗಿ ಈ ವೃತ್ತಕ್ಕೆ ಕೆ.ಎನ್.ಟೇಲರ್ ಹೆಸರಿಡಬೇಕು ಮತ್ತು ವೃತ್ತದಲ್ಲಿ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.
 ತುಳುನಾಡ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರಾವ್ ಕಡಬ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಸಿರಾಜ್ ಅಡ್ಕರೆ , ದ.ಕ ಜಿಲ್ಲಾ ಟೈಲರ್ ಅಸೋಸಿಯೇಶನ್ ಮುಖಂಡ ಜಯಶೀಲ, ರಂಗಭೂಮಿ ನಟ ಸೀತಾರಾಮ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News