ಜಲ್ಲಿ ಕ್ರಷರ್ ವಿರುದ್ಧ ಇಂದು ಧರಣಿ
Update: 2016-03-30 18:58 GMT
ಉಡುಪಿ, ಮಾ.30: ಶಿವಪುರ ಗ್ರಾಮದ ಯಳಗೋಳಿ ಕಲ್ಮುಂಡ, ಕುಂಟೆಬೆಟ್ಟು ಪ್ರದೇಶದಲ್ಲಿ ಪರಿಸರ ಮಾಲಿನ್ಯ ಹಾಗೂ ಸ್ಥಳೀಯರ ಆರೋಗ್ಯಕ್ಕೆ ಮಾರಕ ಆಗಿರುವ ಜಲ್ಲಿ ಕ್ರಷರ್ನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸ್ಥಳೀಯರು ಮಾ.31ರಂದು ಪೂರ್ವಾಹ್ನ 11ಗಂಟೆಯಿಂದ ಸಂಜೆ 6ಗಂಟೆಯವರೆಗೆ ಮಣಿಪಾಲ ದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.