×
Ad

ನಮ್ಮ ವೇಷಭೂಷಣ ನೋಡಿಯೇ ನಮಗೆ ಥಳಿಸಿದರು ಜೈ ಮಾತಾಕಿ ಹೇಳಲು ನಿರಾಕರಿಸಿ ಹಲ್ಲೆಗೊಳಗಾದ ಮದ್ರಸ ವಿದ್ಯಾರ್ಥಿ

Update: 2016-03-31 23:45 IST

ಹೊಸದಿಲ್ಲಿ, ಮಾ.31: ‘‘ನಮ್ಮ ವೇಷಭೂಷಣ ನೋಡಿಯೇ ಅವರು ನಮ್ಮನ್ನು ಗುರಿ ಮಾಡಿದರು ಇದು ಜೈ ಮಾತಾಕಿ ಎಂದು ಹೇಳಲು ನಿರಾಕರಿಸಿದ್ದಕ್ಕೆ ಶನಿವಾರ ಗುಂಪೊಂದರಿಂದ ಹಲ್ಲೆಗೊಳಗಾದ ಮೂವರ ಪೈಕಿ ಮುಹಮ್ಮದ್ ದಿಲ್ಕಶ್ ಅವರ ಮಾತು. ದಿಲ್ಲಿಯ ಹೊರವಲಯದ ಬೇಗಂಪುರ್‌ನಲ್ಲಿ ಮದ್ರಸವೊಂದರ ಮೂವರು ವಿದ್ಯಾರ್ಥಿ ದಿಲ್ಕಶ್,ಮುಹಮ್ಮದ್ ಅಜ್ಮಲ್ ಹಾಗೂ ಮುಹಮ್ಮದ್ ನಯೀಮ್ ಅವರ ಮೇಲೆ ಐದು ಮಂದಿಯ ತಂಡವೊಂದು ಹಲ್ಲೆ ನಡೆಸಿತ್ತು. ಸಮೀಪದ ಪಾರ್ಕ್ ಒಂದರಲ್ಲಿ ನಡೆದುಕೊಂಡು ಹೋಗುತ್ತಿರುವಾಗ 5 -6 ಮಂದಿಯ ತಂಡ ಬಂದು ಅಜ್ಮಲ್ ಕಪಾಳಕ್ಕೆ ಬಾರಿಸಿ ಜೈ ಮಾತಾಕಿ ಎಂದು ಕೂಗದಿದ್ದರೆ ಕೊಂದು ಹಾಕುವುದಾಗಿ ಬೆದರಿಕೆ ಹಾಕಿತ್ತು ಎಂದು ದಿಲ್ಕಶ್ ಹೇಳಿದ್ದಾನೆ. ಅದೇ ದಿನ ಬೆಳಗ್ಗೆ ಜನರಿಗೆ ಘೋಷಣೆ ಕೂಗಲು ಬಲವಂತ ಪಡಿಸುವ ಕುರಿತು ಪತ್ರಿಕೆಯಲ್ಲಿ ಓದಿದ್ದೆ. ಆದರೆ ಅದು ನನಗೇ ಆಗುತ್ತೆ ಎಂದು ಯೋಚಿಸಿಯೇ ಇರಲಿಲ್ಲ. ಅದೇ ದಿನ ಸಂಜೆ ನನಗೆ ಹಾಗೂ ನನ್ನ ಸ್ನೇಹಿತರಿಗೆ ಹೀಗಾಯಿತು ಎಂದು ದಿಲ್ಕಶ್ ಹೇಳಿದ್ದಾನೆ. ನಾವಿನ್ನೂ ಯಾವುದೇ ಪ್ರತಿಕ್ರಿಯೆ ನೀಡುವ ಮೊದಲೇ ಅವರು ನಮ್ಮ ಟೋಪಿ ತೆಗೆದು ನೆಲಕ್ಕೆ ಬಿಸಾಡಿದರು. ನಂತರ ನಮಗೆ ಹೊಡೆಯಲು ಪ್ರಾರಂಭಿಸಿದರು. ಅವರು ನಿರ್ದಯವಾಗಿ ನಮ್ಮನ್ನು ಥಳಿಸಿದರು. ಹೇಗೋ ನಾವು ಅಲ್ಲಿಂದ ಓಡಿ ತಪ್ಪಿಸಿಕೊಂಡು ಪಾರ್ಕ್‌ನ ಹೊರಗೆ ಬಂದು ನಮ್ಮ ಶಿಕ್ಷಕ ಮುಹಮ್ಮದ್ ಅಝರ್‌ರನ್ನು ಕರೆದೆವು. ಅವರು ನಮ್ಮ ಮುಖ್ಯಸ್ಥರನ್ನು ಕರೆದು ಬಳಿಕ ಪೊಲೀಸರಿಗೆ ತಿಳಿಸಿದೆವು . ಸ್ವಲ್ಪ ಸಮಯದ ಬಳಿಕ ಬಂದ ಪೊಲೀಸರು ನಮ್ಮನ್ನು ಸಂಜಯ್ ಗಾಂಧೀ ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ದಿಲ್ಕಶ್ ಎಫ್ ಐ ಆರ್ ನಲ್ಲಿ ಹೇಳಿದ್ದಾನೆ. ಪೊಲೀಸರು ಬಿಝಿ ಇದ್ದೀವೆಂದು ಹೇಳಿ ಎಫ್ ಐ ಆರ್ ದಾಖಲಿಸಲು ಮೂರು ದಿನ ತೆಗೆದುಕೊಂಡರು. ಅದರಲ್ಲೂ ಟೋಪಿ ಬಿಸಾಡಿದ ವಿಷಯ ಬರೆಯಲು ನಿರಾಕರಿಸಿದರು ಎಂದು ಮದ್ರಸದ ಇತರರು ದೂರಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News