ಶಿರೂರು: ಟ್ರಕ್ಕಿಂಗ್ ತೆರಳಿದ್ದ ವಿದ್ಯಾರ್ಥಿ ಮೃತ್ಯು

Update: 2016-04-10 18:32 GMT

ಬೈಂದೂರು, ಎ.10: ಇಲ್ಲಿನ ಶಿರೂರು ಸಮೀಪದ ಕೋಸಳ್ಳಿ ಜಲಪಾತಕ್ಕೆ ಟ್ರಕ್ಕಿಂಗ್ ತೆರಳಿದ್ದ ಉಡುಪಿಯ ಎಂಜಿಎಂ ಕಾಲೇಜಿವ ವಿದ್ಯಾರ್ಥಿಯೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ. ಉಡುಪಿ ಎಂಜಿಎಂ ಕಾಲೇಜಿನ ಬಿಸಿಎ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಪ್ರಸಾದ್ ಅಮೀನ್(21) ಮೃತಪಟ್ಟ ವಿದ್ಯಾರ್ಥಿ. ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳ ತಂಡ ಇಂದು ಬೆಳಗ್ಗೆ ಕೋಸಳ್ಳಿ ಜಲಪಾತಕ್ಕೆ ಟ್ರಕ್ಕಿಂಗ್ ತೆರಳಿತ್ತು. ಈ ಸಂದರ್ಭ ವಿದ್ಯಾರ್ಥಿ ಪ್ರಸಾದ್ ಎತ್ತರದ ಪ್ರದೇಶಕ್ಕೆ ತೆರಳಿದ್ದು, ಅಲ್ಲಿಂದ ಕಾಲು ಜಾರಿ ಬಿದ್ದಿದ್ದು, ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News