ಬೈಕಿಗೆ ಕಾಡುಕೋಣ ಢಿಕ್ಕಿ: ಸವಾರ ಮೃತ್ಯು

Update: 2016-04-17 18:46 GMT

ಕೊಲ್ಲೂರು, ಎ.17: ಮಾಸ್ತಿಕಟ್ಟೆ ಸೇತುವೆ ಬಳಿ ಕಾಡುಕೋಣವೊಂದು ಚಲಿಸುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಕೊಲ್ಲೂರು ದಳಿ ನಿವಾಸಿ ಭಾಸ್ಕರ ಗಾಣಿಗ(52) ಎಂದು ಗುರುತಿಸಲಾಗಿದೆ. ಇವರು ಎ.16ರಂದು ಸಂಜೆ ವೇಳೆ ಮಾಸ್ತಿಕಟ್ಟೆಯಲ್ಲಿ ದೇವರಿಗೆ ದೀಪ ಹಚ್ಚಿ ವಾಪಸು ತನ್ನ ಬೈಕ್‌ನಲ್ಲಿ ಕೊಲ್ಲೂರು ಕಡೆಗೆ ಬರುತ್ತಿದ್ದಾಗ ವೇಗವಾಗಿ ಓಡಿಬಂದ ಕಾಡುಕೋಣವೊಂದು ಭಾಸ್ಕರ ಗಾಣಿಗರ ಬೈಕ್‌ಗೆ ಢಿಕ್ಕಿ ಹೊಡೆಯಿತು. ಇದರಿಂದ ಭಾಸ್ಕರ ಗಾಣಿಗ ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಎ.17ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಚಿಕಿತ್ಸೆ ಫಲಾಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News