×
Ad

ಮಹಾರಾಷ್ಟ್ರ ಪಂಚಾಯತ್‌ಚುನಾವಣೆಯಲ್ಲಿ ಮುದುಡಿದ ಕಮಲ

Update: 2016-04-19 23:57 IST

ಮುಂಬೈ, ಎ.19: ಮಹಾರಾಷ್ಟ್ರದ ಆರು ನಗರ ಪಂಚಾಯತ್ ಚುನಾವಣೆಯಲ್ಲಿ ಕೇವಲ ಐದು ಸ್ಥಾನ ಪಡೆದು ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದರೆ, ಕಾಂಗ್ರೆಸ್ 21 ಸ್ಥಾನಗಳನ್ನು ಪಡೆದಿದೆ. ಶಿವಸೇನಾ ಹಾಗೂ ನ್ಯಾಷನಲಿಸ್ಟ್‌ಕಾಂಗ್ರೆಸ್ ಪಾರ್ಟಿತಲಾ 20 ಸ್ಥಾನಗಳನ್ನು ಪಡೆದಿವೆ. ಒಟ್ಟು 102 ಸ್ಥಾನಗಳಿಗೆ ರವಿವಾರ ಮತದಾನ ನಡೆದಿದ್ದರೆ ಸೋಮವಾರ ಮತ ಎಣಿಕೆ ನಡೆದಿತ್ತು.


ಈ ಚುನಾವಣಾ ಫಲಿತಾಂಶದಿಂದ ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ನಾರಾಯಣರಾಣೆತಮ್ಮ ಕಳೆದುಹೋದ ಪ್ರತಿಷ್ಠೆಯನ್ನು ಮರಳಿ ಪಡೆದಿದ್ದಾರೆ.ರಾಣೆ 2014ನೆ ಅಸೆಂಬ್ಲಿ ಚುನಾವಣೆಯಲ್ಲಿ ಹಾಗೂ 2015ರ ಬಾಂದ್ರಾ ಉಪಚುನಾವಣೆಯಲ್ಲಿ ಸೋಲನ್ನುಕಂಡಿದ್ದರೆ ಈ ಬಾರಿ ಕಾಂಗ್ರೆಸ್ ಕುಡಾಲ್ ನಗರ ಪಂಚಾಯತ್‌ನಲ್ಲಿ ವಿಜಯ ದಾಖಲಿಸುವಲ್ಲಿ ಸಫಲವಾಗಿದೆ. ಇಲ್ಲಿನಒಟ್ಟು 17 ಸ್ಥಾನಗಳಲ್ಲಿ ರಾಣೆ ನೇತೃತ್ವದ ಕಾಂಗ್ರೆಸ್ 9 ಸ್ಥಾನಗಳನ್ನು ಪಡೆದರೆ, ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಶಿವಸೇನೆ ಹಾಗೂ ಬಿಜೆಪಿ ಈ ಪಂಚಾಯತ್‌ನಲ್ಲಿ ವಿಜಯ ಸಾಧಿಸಬೇಕೆಂದು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ್ದುಕೇಂದ್ರರೈಲ್ವೇಸಚಿವಸುರೇಶ್ ಪ್ರಭುಕೂಡ ಪ್ರಚಾರಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಉಸ್ಮಾನಾಬಾದಿನ ಲೊಹರ ನಗರ ಪಂಚಾಯತ್‌ಚುನಾವಣೆಯಲ್ಲಿ ಶಿವ ಸೇನೆ ಅತ್ಯಂತಹೆಚ್ಚುಅಂದರೆ, 9 ಸ್ಥಾನಗಳನ್ನು ಪಡೆದರೆ, ಎನ್‌ಸಿಪಿ (4) ಹಾಗೂಕಾಂಗ್ರೆಸ್ (3) ಸ್ಥಾನಗಳನ್ನು ಪಡೆದವು, ಬಿಜೆಪಿ ಇಲ್ಲಿ ಒಂದೂ ಸ್ಥಾನವನ್ನು ಪಡೆದಿಲ್ಲ.
ಸೋಲಾಪುರದ ಮೊಹೊಲ್ ಹಗೂಮಧ ನಗರ ಪಂಚಾಯತ್‌ಗಳಲ್ಲಿ ಕೂಡ ಶಿವಸೇನೆ ಹಾಗೂ ಎನ್‌ಸಿಪಿ ಬಿಜೆಪಿಯನ್ನು ಹಿಂದಿಕ್ಕಿದವು.
 ಸತಾರಾದಲೋನಂಡ್ ನಗರ ಪಂಚಾಯತ್‌ನಲ್ಲಿ ಎನ್‌ಸಿಪಿ ಎಂಟು ಸೀಟುಗಳನ್ನು ಪಡೆದಿದೆ. ಕಾಂಗ್ರೆಸ್‌ಆರು ಸೀಟುಗಳನ್ನು ಪಡೆದರೆ, ಬಿಜೆಪಿ ಒಟ್ಟು 17 ಸ್ಥಾನಗಳಲ್ಲಿ ಕೇವಲ 2 ಸ್ಥಾನಗಳಲ್ಲಿ ವಿಜಯಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News