ಅಕ್ರಮ ಜಾನುವಾರು ಸಾಗಾಟ: ಇಬ್ಬರ ಬಂಧನ
Update: 2016-04-20 18:40 GMT
ಬ್ರಹ್ಮಾವರ, ಎ.20: ಉಪ್ಪೂರು ಗ್ರಾಮದ ಗಣಪತಿ ದೇವಸ್ಥಾನದ ಸಮೀಪ ಎ.19ರಂದು ಅಪರಾಹ್ನ ವೇಳೆ ಅಕ್ರಮವಾಗಿ ವಾಹನದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಿಯಾಝ್ ಹಾಗೂ ಶಂಕರ ಎಂದು ಗುರುತಿಸಲಾಗಿದೆ. ಇವರಿಂದ 21,500 ರೂ. ವೌಲ್ಯದ ನಾಲ್ಕು ಜಾನುವಾರು ಹಾಗೂ 3ಲಕ್ಷ ರೂ. ವೌಲ್ಯದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.