ದೇಶದ್ರೋಹಿ ಡಾ. ಕನ್ಹಯ್ಯ ರೋಗಿಗಳಿಗೆ ಹೇಗೆ ಆಪರೇಶನ್ ಮಾಡುತ್ತಾನೆ ?

Update: 2016-04-22 16:13 GMT

ಜವಾಹರ್ ಲಾಲ್ ನೆಹರೂ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರಿಗೆ ಸಂಘ ಪರಿವಾರ ನೀಡಿರುವ  ಹೆಸರು, ಬಿರುದು ಬಾವಲಿಗಳಿಗೆ ಲೆಕ್ಕವಿಲ್ಲ.. ದೇಶ ದ್ರೋಹಿ , ದೇಶ ವಿರೋಧಿ, ಪ್ರಚಾರ ಪ್ರೇಮಿ, ಭಯೋತ್ಪಾದಕ, ಅಭಿವೃದ್ಧಿ ವಿರೋಧಿ ಇತ್ಯಾದಿ ಇತ್ಯಾದಿ ಎಲ್ಲ ಹೆಸರುಗಳು ಅವರಿಗೆ ಸಿಕ್ಕಿವೆ. 

ಈಗ ಇದೇ ಪರಿವಾರದ ಆಲೋಚನೆಯ ಸಂಘಟನೆ ಕನ್ಹಯ್ಯ ಗೆ ಇನ್ನೊಂದು ಪದವಿಯನ್ನು ದಯಪಾಲಿಸಿದೆ. ಅದು ಕನ್ಹಯ್ಯರನ್ನು ವೈದ್ಯನಾಗಿಸಿಬಿಟ್ಟಿದೆ !
ಕನ್ಹಯ್ಯ ಮುಂಬೈ ಭೇಟಿಯನ್ನು ವಿರೋಧಿಸಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ವೀರ ಸೇನಾ ನಾಯಕ ನಿರಂಜನ್ ಪಾಲ್ ಮಾತನಾಡಿದರು. ಸಾಮಾನ್ಯವಾಗಿ ಸಂಘ ಪರಿವಾರದ ಸಂಘಟನೆಗಳು, ನಾಯಕರು ಮಾಡುವ ಮಾಮೂಲಿ ಆರೋಪಗಳನ್ನೆಲ್ಲ ಈತ ಕನ್ಹಯ್ಯ ವಿರುದ್ಧ ಮಾಡಿದ . 

ಆದರೆ ಮತ್ತೆ ಆತ ನೀಡಿದ ಹೇಳಿಕೆಗೆ ಮಾತ್ರ ಆಗ ಅಲ್ಲಿದ್ದವರೆಲ್ಲ ಬಿದ್ದು ಬಿದ್ದು ನಕ್ಕರೆ ಈಗ ಇಡೀ ವಿಶ್ವವೇ ನಗುತ್ತಿದೆ. 

" ಈ ದೇಶವನ್ನು ವಿಭಜಿಸುವ ಮಾತನಾಡುವ ಕನ್ಹಯ್ಯ ಈಗ ಪಿ ಎಚ್ ಡಿ ಮಾಡಿ ವೈದ್ಯನಾಗುತ್ತಿದ್ದಾನೆ. ಆತ ಹೇಗೆ ರೋಗಿಗಳಿಗೆ ಸೇವೆ ನೀಡುತ್ತಾನೆ, ಅವರ ಕಾಯಿಲೆ ಪತ್ತೆ ಹಚ್ಚುತ್ತಾನೆ , ಅವರಿಗೆ ಆಪರೇಶನ್ ಮಾಡುತ್ತಾನೆ ?" ಎಂದು ಕೇಳಿ ಬಿಟ್ಟಿದ್ದಾನೆ ಈ ನಿರಂಜನ್ ಪಾಲ್ !

ಕನ್ಹಯ್ಯ ಕಲಿಯುತ್ತಿರುವುದು ಆಫ್ರಿಕನ್ ಸ್ಟಡೀಸ್ ನಲ್ಲಿ  ಪಿ ಎಚ್ ಡಿ. ಇದರಿಂದ ಆತ ವೈದ್ಯನಾಗುವುದಿಲ್ಲ ಎಂದು ಅಲ್ಲಿದ್ದ ಪತ್ರಕರ್ತರು ಹೇಳಿದರೂ ಈ ಪಾಲ್ ತನ್ನ ಹಠ ಬಿಡಲಿಲ್ಲ. 

" ಆದರೂ ಆತ ವೈದ್ಯ ಆಗುತ್ತಾನೆ. ರೋಗಿಗಳು ಆತನ ಬಳಿ ಬರುತ್ತಾರೆ " ಎಂದು ಮತ್ತೆ ಹೇಳಬೇಕೇ ? 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News