ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಟ್ರಸ್ಟ್ ರಚನೆ

Update: 2016-05-04 18:30 GMT

ಬಂಟ್ವಾಳ, ಮೇ 4: ಕಳೆದ 2 ವರ್ಷಗಳಿಂದ ‘ಕನ್ನಡದ ಕಲ್ಹಣ’ ಪ್ರಶಸ್ತಿ ನೀಡುತ್ತಾ ಬಂದಿರುವ ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ಇದೀಗ ಈ ಪ್ರಶಸ್ತಿಯನ್ನು ಶಾಶ್ವತವಾಗಿ ನೀಡುವ ಸಲುವಾಗಿ ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಟ್ರಸ್ಟನ್ನು ರಚನೆ ಮಾಡಿ ಕಾನೂನುಬದ್ಧವಾಗಿ ನೋಂದಣಿ ಮಾಡಿದೆ. ಟ್ರಸ್ಟಿಗಳಾಗಿ ಬಿ.ತಮ್ಮಯ್ಯ, ಎಸ್.ಗಂಗಾಧರ ಭಟ್, ಕೆ. ಮೋಹನ್ ರಾವ್, ವಿಜಯಲಕ್ಷ್ಮೀ ಎನ್., ಸರೋಜ ಎನ್. ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News