ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಟ್ರಸ್ಟ್ ರಚನೆ
Update: 2016-05-04 18:30 GMT
ಬಂಟ್ವಾಳ, ಮೇ 4: ಕಳೆದ 2 ವರ್ಷಗಳಿಂದ ‘ಕನ್ನಡದ ಕಲ್ಹಣ’ ಪ್ರಶಸ್ತಿ ನೀಡುತ್ತಾ ಬಂದಿರುವ ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ಇದೀಗ ಈ ಪ್ರಶಸ್ತಿಯನ್ನು ಶಾಶ್ವತವಾಗಿ ನೀಡುವ ಸಲುವಾಗಿ ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಟ್ರಸ್ಟನ್ನು ರಚನೆ ಮಾಡಿ ಕಾನೂನುಬದ್ಧವಾಗಿ ನೋಂದಣಿ ಮಾಡಿದೆ. ಟ್ರಸ್ಟಿಗಳಾಗಿ ಬಿ.ತಮ್ಮಯ್ಯ, ಎಸ್.ಗಂಗಾಧರ ಭಟ್, ಕೆ. ಮೋಹನ್ ರಾವ್, ವಿಜಯಲಕ್ಷ್ಮೀ ಎನ್., ಸರೋಜ ಎನ್. ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.