ಅಕ್ರಮ ಮರಳು ಸಾಗಾಟ: ನಾಲ್ವರ ಬಂಧನ
Update: 2016-05-05 12:00 GMT
ಉಪ್ಪಿನಂಗಡಿ, ಮೇ 5: ದಾಖಲೆ ರಹಿತವಾಗಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಎರಡು ಲಾರಿಗಳನ್ನು ಮುಟ್ಟುಗೋಲು ಹಾಕಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮರಳನ್ನು ಗಸ್ತು ನಿರತ ಉಪ್ಪಿನಂಗಡಿ ಎಸ್ಸೈ ಸಂಜೀವ ರೈ ನೇತೃತ್ವದ ಪೊಲೀಸ್ ತಂಡ ಪತ್ತೆ ಹಚ್ಚಿ ಎರಡು ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿದೆ.
ಲಾರಿಯಲ್ಲಿದ್ದ ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿ ಬೆಂಗಳೂರಿನ ನಿವಾಸಿ ಉಮೇಶ್, ತುಮಕೂರಿನ ನಿವಾಸಿಗಳಾದ ರಂಗರಾಜ್, ಕಾಂತರಾಜ್, ಹಾಗೂ ಶಿವಣ್ಣ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.