ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ರಿಂದ ಬಿಷಪ್ ಭೇಟಿ
Update: 2016-05-05 18:03 GMT
ಮಂಜೇಶ್ವರ, ಮೇ 5: ಮಂಜೇಶ್ವರ ವಿಧಾನಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಮಂಗಳೂರು ಧರ್ಮ ಪ್ರಾಂತದ ಬಿಷಪ್ರನ್ನು ಬಿಷಪ್ ಹೌಸ್ನಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.
ಕೇಂದ್ರದ ಮೋದಿ ಸರಕಾರ ಜನಪರ ಆಡಳಿತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಪ್ರಭಾವ ಭಾರತಕ್ಕೆ ಗರಿ ಮೂಡಿಸಿದೆ ಎಂದು ಬಿಷಪ್ ಅಭಿಪ್ರಾಯಪಟ್ಟರು. ಕೆ.ಸುರೇಂದ್ರನ್ ಗೆದ್ದು ಬರಲಿ ಎಂದು ಹಾರೈಸಿದರು. ಬಾಲಕೃಷ್ಣ ಶೆಟ್ಟಿ ಜೊತೆಗಿದ್ದರು.