ಉಳ್ಳಾಲ: ಹತ್ಯೆಗೀಡಾದ ಸೈಫ್ವಾನ್ ಕುಟುಂಬಕ್ಕೆ ಮುಸ್ಲಿಮ್ ಸೆಂಟ್ರಲ್ ಕಮಿಟಿಯಿಂದ ಧನಸಹಾಯ

Update: 2016-05-10 11:24 GMT

ಮಂಗಳೂರು, ಮೇ 10: ಇತ್ತೀಚೆಗೆ ತೊಕ್ಕೊಟ್ಟು ದುಷ್ಕರ್ಮಿಗಳ ತಲವಾರು ದಾಳಿಗೆ ಒಳಗಾಗಿ ಗಾಯಗೊಂಡು ಮರಣ ಹೊಂದಿದ ಪಿಲಾರ್ ನಿವಾಸಿ ಮುಹಮ್ಮದ್ ಸೈಫ್ವಾನ್‌ರ ಮನೆಗೆ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ.ಕೆ.ಎಸ್.ಮುಹಮ್ಮದ್ ಮಸೂದ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತುರ್ತು ಪರಿಹಾರವಾಗಿ ಧನಸಹಾಯವನ್ನು ನೀಡಿದರು.

ನಿಯೋಗದಲ್ಲಿ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಕೆ.ಅಶ್ರಫ್, ಕಾರ್ಯದರ್ಶಿಗಳಾದ ಮಜೀದ್ ಸಿತಾರ್, ಯು.ಬಿ. ಸಲೀಂ, ಸಿ.ಎಂ.ಮುಸ್ತಫಾ ಹಮೀದ್ ಕುದ್ರೋಳಿ, ಅಹ್ಮದ್ ಬಾವ ಬಜಾಲ್, ಎನ್.ಕೆ.ಅಬೂಬಕರ್, ಸಿ.ಎಂ.ಹನೀಫ್, ಮುಹಮ್ಮದ್ ಬಪ್ಪಳಿಗೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News