ರಾಜಸ್ಥಾನ ಐಎಎಸ್ ಅಧಿಕಾರಿ ಮನೆಯ ಮೇಲೆ ಎಸಿಬಿ ದಾಳಿ

Update: 2016-05-18 17:46 GMT

 ಜೈಪುರ,ಮೇ 18: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಆಂದೋಲನ (ಎನ್‌ಆರ್‌ಎಚ್‌ಎಂ)ದ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ನೀರಜ್ ಕೆ.ಪವನ್ ಮತ್ತು ಇತರ ಮೂವರು ಅಧಿಕಾರಿಗಳ ನಿವಾಸಗಳು ಮತ್ತು ಕಚೇರಿಗಳು ಸೇರಿದಂತೆ 15 ಕಡೆಗಳಲ್ಲಿ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ)ವು ಬುಧವಾರ ದಾಳಿ ನಡೆಸಿದೆ.

ಪವನ್ ವಿರುದ್ಧ ಅವರು ಎನ್‌ಆರ್‌ಎಚ್‌ಎಮ್‌ನ ಹೆಚ್ಚುವರಿ ನಿರ್ದೇಶಕರಾಗಿದ್ದಾಗ ಟೆೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನೆಸಗಿದ್ದ ಆರೋಪಗಳಿವೆ ಎಂದು ಎಸಿಬಿ ಐಜಿ ದಿನೇಶ ಎಂ.ಎನ್.ತಿಳಿಸಿದರು. 2003ನೇ ತಂಡದ ಐಎಎಸ್ ಅಧಿಕಾರಿಯಾಗಿರುವ ಪವನ್ ಪ್ರಸ್ತುತ ಕೃಷಿ ಇಲಾಖೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News